Webdunia - Bharat's app for daily news and videos

Install App

ಅಮಿತ್ ಶಾಗೆ ಅಡುಗೆ ಮಾಡಿದವರು ಯಾರು: ಮಾಯಾವತಿ ಹುಡುಕಾಟ

Webdunia
ಶುಕ್ರವಾರ, 3 ಜೂನ್ 2016 (16:32 IST)
ಕಳೆದ ವಾರ ಉತ್ತರ ಪ್ರದೇಶದ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಲಿತರ ಮನೆಯಲ್ಲಿ ಊಟ ಮಾಡಿದ್ದರು. ಈ ಕುರಿತು ವಿರೋಧ ಪಕ್ಷಗಳ ಟೀಕಾಪ್ರಹಾರ ಮುಂದುವರೆದಿದ್ದು ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಮಿತ್ ಶಾ ದಲಿತ ಮನೆಯಲ್ಲಿ ಊಟ ಮಾಡಿದ್ದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದ ಬೆನ್ನಲ್ಲೇ ಬಿಎಸ್‌ಪಿ ನಾಯಕಿ ಮಾಯಾವತಿ ಶಾ ದಲಿತರ ಮನೆಯಲ್ಲಿ ಶಾ ಅವರಿಗೆ ಅಡುಗೆ ಮಾಡಿದವರು ಯಾರೆಂಬ ಹುಡುಕಾಟದಲ್ಲಿದ್ದಾರೆ.

ಅಂದು ಶಾ ಅವರಿಗೆ ಅಡುಗೆ ಮಾಡಿ ಬಡಿಸಿದವರು ದಲಿತರಾಗಿರಲಿಕ್ಕೆ ಸಾಧ್ಯವೇ ಇಲ್ಲ. ಅವರು ಮೇಲ್ವರ್ಗವದರಾಗಿರಬೇಕು ಎಂಬುದು ಮಾಯಾವತಿ ಅವರಿಗಿರುವ ಬಲವಾದ ನಂಬಿಕೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನು ಪತ್ತೆ ಹಚ್ಚುವಂತೆ ತಮಗೆ ಸೂಚನೆ ಬಂದಿದ್ದು ಶಾ ಅವರಿಗಾಗಿ ಅಡುಗೆ ಮಾಡಿದವರು ಯಾರೆಂಬುದನ್ನು ಶೀಘ್ರದಲ್ಲಿಯೇ ಕಂಡು ಹಿಡಿಯುತ್ತೇವೆ ಎಂದು ಪಕ್ಷದ ವಲಯ ಸಂಯೋಜಕರಾದ ಡಾಕ್ಟರ್ ರಾಮ್ ಕುಮಾರ್ ಕುರೀಲ್ ತಿಳಿಸಿದ್ದಾರೆ. 
 
ಅಂದು ಶಾ ಅವರ ಜತೆ ಸುಮಾರು 250 ಜನರಿದ್ದರು. ಅವರಲ್ಲಿ ಕೇವಲ 50 ಜನರು ದಲಿತರ ಮನೆಯಲ್ಲಿ ಊಟ ಮಾಡಿದರು. ಇದು ಕೇಸರಿ ಪಕ್ಷದ ಜಾತೀಯ ಮನಸ್ಥಿತಿಯನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ  ಶಾ ಊಟ ಮಾಡಿದ್ದು ಅತಿ ಹಿಂದುಳಿದ ಬಿಂಡ್ ಸಮುದಾಯದವರ ಮನೆಯಲ್ಲಿ ಹೊರತು ದಲಿತರ ಮನೆಯಲ್ಲಲ್ಲ. ಶಾ ತಮ್ಮ ಜತೆ ಕೆಲವು ಜನ ದಲಿತರನ್ನು ಸಹ ಕರೆತಂದಿದ್ದರು ಮತ್ತು ಅವರ ಜತೆ ಕುಳಿತು ಊಟ ಮಾಡಿದರು. ಇದರ ಹಿಂದೆ ಇದ್ದಿದ್ದು ಕೇವಲ ರಾಜಕೀಯ ಉದ್ದೇಶ ಎಂದು ಕುರೀಲ್ ಆರೋಪಿಸಿದ್ದಾರೆ. 
 
ವಾರಣಾಸಿಯ ಸೇವಾಪುರಿಯ ಜೋಗಿಯಾಪುರ್ ಗ್ರಾಮದಲ್ಲಿ ದಲಿತ ಕುಟುಂಬ ಗಿರಿಜಾ ಪ್ರಸಾದ್ ಮತ್ತು ಇಕ್ಬಾಲ್ ಬಿಂದ್ ಎಂಬುವರ ಮನೆಯಲ್ಲಿ ಶಾ ಕಳೆದ ಮಂಗಳವಾರ ನೆಲದಲ್ಲಿ ಕುಳಿತು ಭೋಜನ ಸೇವಿಸಿದ್ದರು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ದೇವೇಗೌಡರಿಗೆ 92ನೇ ಜನ್ಮದಿನದ ಸಂಭ್ರಮ: ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಮುಂದಿನ ಸುದ್ದಿ
Show comments