ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸಮಾಧಿ ಬಳಿ ಅವರ ಸಮಾಧಿ ಪಕ್ಕದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುತ್ತಿದ್ದಾರೆ.
ಮರೀನಾ ಬೀಚ್ನಲ್ಲಿರುವ ಜಯಾ ಸಮಾಧಿ ಬಳಿ ಜನಸಾಗರವೇ ಹರಿದು ಬರುತ್ತಿದೆ. ನಿನ್ನೆ ಜಯಾ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದಿದ್ದವರು ಇಂದು ಸಮಾಧಿಗೆ ತೆರಳಿ ಗೌರವ ಸಲ್ಲಿಸುತ್ತಿದ್ದಾರೆ. ಅವರಲ್ಲಿ ಕೆಲವರು ಸಮಾಧಿ ಪಕ್ಕದಲ್ಲಿ ಕುಳಿತು ಸ್ವಇಚ್ಛೆಯಿಂದ ಕೇಶಮುಂಡನ ಮಾಡಿಸಿಕೊಂಡು ಜಯಾ ಅವರಿಗೆ ಶ್ರಂದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು, ಜಯಲಲಿತಾ ಸಂಪೂರ್ಣ ತಮಿಳುನಾಡಿಗೆ ಅಮ್ಮ ಇದ್ದಂತೆ. ಹೀಗಾಗಿ ಕೇಶಮುಂಡನ ಮಾಡಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ.
ವಿದೇಶ ಪ್ರಯಾಣದಲ್ಲಿದ್ದ ತಮಿಳಿನ ಪ್ರಸಿದ್ಧ ನಟ ಅಜಿತ್ ಸಹ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಇಂದು ಮುಂಜಾನೆ ಚೆನ್ನೈಗೆ ಮರಳಿ ನೇರವಾಗಿ ಮರೀನಾ ಬೀಚ್ಗೆ ತೆರಳಿ ಜಯಾ ಸಮಾಧಿಗೆ ಗೌರವವನ್ನು ಸಮರ್ಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ