Webdunia - Bharat's app for daily news and videos

Install App

'ಪಾಕಿಸ್ತಾನವನ್ನು ಸರ್ವನಾಶ ಮಾಡಿ' ಹುತಾತ್ಮ ಯೋಧನ ಪತ್ನಿಯ ಮನವಿ

Webdunia
ಶನಿವಾರ, 29 ಅಕ್ಟೋಬರ್ 2016 (18:01 IST)
ಚಂಡಿಗಡ: 'ಪಾಕಿಸ್ತಾನಕ್ಕೆ ಬುದ್ದಿ ಹೇಳಿ, ಒಂದು ವೇಳೆ ಮಾತು ಕೇಳದಿದ್ದರೆ ಪಾಕಿಸ್ತಾನವನ್ನು ಸರ್ವನಾಶ ಮಾಡಿಬಿಡಿ' ಇಂತಹದ್ದೊಂದು ಮಾತನ್ನು ಪ್ರಧಾನಿ ಮೋದಿಗೆ ಮನವಿ ಮಾಡಿಕೊಳ್ಳಲಾಗಿದೆ. ಯಾರೋ ಒಬ್ಬರು ವಿನಂತಿಸಿಕೊಂಡಿದ್ದಾರೆ ಎಂದರೆ ಸುಮ್ಮನಾಗಬಹುದಿತ್ತು. ಆದರೆ ಆ ಮಾತು ಹೊರಹೊಮ್ಮಿದ್ದು ಒಂದು ದಿನದ ಹಿಂದಷ್ಟೇ ಹುತಾತ್ಮನಾದ ಯೋಧ ಮನದೀಪ್ ಅವರ ಪತ್ನಿಯಿಂದ ..! 
 

 
ಭಾರತ ಪಾಕ್ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಗುಂಡಿನ ಕಾಳಗ ನಿರಂತರವಾಗಿದ್ದು, ಎರಡೂ ರಾಷ್ಟ್ರದ ಸೈನಿಕರು ಸಾವನಪ್ಪುತ್ತಿದ್ದಾರೆ. ಸರ್ಜಿಕಲ್ ಆಪರೇಶನ್ ಆದ ನಂತರ ಪಾಕ್ ಸೈನಿಕರು ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದಾರೆ. ಅದರಲ್ಲೂ ಕಳೆದ ಅದರಲ್ಲೂ ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಭಾರತದ ಮೂವರು ಸೈನಿಕರು ಪಾಕಿಗಳ ಗುಂಡಿಗೆ ಬಲಿಯಾಗಿದ್ದಾರೆ. ಅದರಲ್ಲಿ ಕುರುಕ್ಷೇತ್ರದ ಸೈನಿಕ ಮನದೀಪ್ ಅವರು ಒಬ್ಬರು. ಅವರ ಪ್ರಾರ್ಥೀವ ಶರೀರವನ್ನು ಶನಿವಾರ ತವರೂರಿಗೆ ತಂದು, ಸರಕಾರಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
 
ಸಂದರ್ಭದಲ್ಲಿ ಮಾತನಾಡಿದ ಹುತಾತ್ಮ ಯೋಧನ ಪತ್ನಿ, ಇತ್ತೀಚೆಗೆ ಕದನ ವಿರಾಮ ಸಾಕಷ್ಟು ನಡೆಯುತ್ತಿದೆ. ಎಷ್ಟೇ ಎಚ್ಚರಿಕೆ ನೀಡಿದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳುತ್ತಿಲ್ಲ. ಒಬ್ಬರ ಮೇಲೊಬ್ಬ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಸಂಭ್ರಮದ ಬೆಳಕಿನ ದೀಪಾವಳಿ ಸೈನಿಕರ ಕುಟುಂಬಕ್ಕೆ ಅಂಧಃಕಾರದ ದೀಪಾವಳಿಯಾಗಿ ಮಾರ್ಪಡುತ್ತಿದೆ. ಇದಕ್ಕೆಲ್ಲ ತಾರ್ಕಿಕ ಅಂತ್ಯ ಹಾಡಬೇಕೆಂದರೆ ಪಾಕಿಸ್ತಾನಕ್ಕೆ ಬುದ್ಧಿ ಮಾತು ಹೇಳಿ ಸುಮ್ಮನಾಗಿಸಬೇಕು. ಇಲ್ಲದಿದ್ದರೆ ಅದನ್ನು ಸರ್ವನಾಶ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಗಂಭೀರ ಚಿಂತನೆ ಮಾಡಬೇಕು ಎಂದು, ದುಃಖದ ನಡುವಿನಲ್ಲೂ ಆಕ್ರೋಶದ ನುಡಿಯನ್ನಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಭಿನ್ನರ ಬಗ್ಗೆ ಬಿಎಸ್ ಯಡಿಯೂರಪ್ಪ ಸ್ಪೋಟಕ ಹೇಳಿಕೆ

ಇದು ಸೇವೆಗಾಗಿ ಬಂದ ಕಾಂಗ್ರೆಸ್ ಅಲ್ಲ, ವ್ಯಾಪಾರಕ್ಕಾಗಿ ಬಂದಿದ್ದು: ಛಲವಾದಿ ನಾರಾಯಣಸ್ವಾಮಿ

ಸಾಲಗಾರನ ಮಗಳನ್ನು ಕರೆದೊಯ್ದ ಪ್ರಕರಣ: ಆರೋಪಿ ಅರೆಸ್ಟ್‌

ನನ್ನ ಶೂ ನೆಕ್ಕಲು ಸಹ ಅರ್ಹನಲ್ಲ: ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು ಕೊಟ್ಟ ಇಂಡಿಗೋ ಸಿಬ್ಬಂದಿ

ಜಮ್ಮುನಲ್ಲಿ ಲ್ಯಾಂಡಿಂಗ್‌ ಆಗಬೇಕಿದ್ದ ಏರ್‌ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌: ಕಾರಣ ನಿಗೂಢ

ಮುಂದಿನ ಸುದ್ದಿ
Show comments