Webdunia - Bharat's app for daily news and videos

Install App

ಸಿಎಂ ಯೋಗಿ ಹೋದ ಮೇಲೆ ಯೋಧನ ಮನೆಯಿಂದ ಸೋಫಾವೂ ಹೋಯ್ತು!

Webdunia
ಸೋಮವಾರ, 15 ಮೇ 2017 (09:30 IST)
ಲಕ್ನೋ: ನಮ್ಮ ದೇಶದಲ್ಲಿ ಇದು ಹೊಸದಲ್ಲ. ವಿಐಪಿಗಳು ಬರುವಾಗ ಅವರ ಕಣ್ಣಿಗೆ ಮಣ್ಣೆರಚಲು ಅಧಿಕಾರಿಗಳು ರಸ್ತೆ ರಿಪೇರಿ ಮಾಡಿಸುವುದು, ಗುಡಿಸಲನ್ನು ಅರಮನೆಯಾಗಿ ಮಾಡುವುದೆಲ್ಲಾ ಮಾಮೂಲಿ. ಅಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 
ಸಿಎಂ ಯೋಗಿ ಆದಿತ್ಯನಾಥ್ ಪಾಕ್ ಯೋಧರಿಂದ ಶಿರಚ್ಛೇದಕ್ಕೊಳಗಾದ ಹುತಾತ್ಮ ಯೋಧ ಪ್ರೇಮ್ ಸಾಗರ್ ಮನೆಗೆ ಭೇಟಿ ನೀಡುವವರಿದ್ದರು. ಅವರು ಬರುವ ಸುದ್ದಿ ತಿಳಿದ ಅಧಿಕಾರಿಗಳು ಯೋಧನ ಮನೆಗೆ ಸೋಫಾ, ಎಸಿ ವ್ಯವಸ್ಥೆ, ಟವೆಲ್, ಫ್ಯಾನ್ ಎಲ್ಲಾ ವ್ಯವಸ್ಥೆ ಮಾಡಿದ್ದರು.

ಸಿಎಂ ಹತ್ತು ನಿಮಿಷ ಕುಟುಂಬದವರೊಂದಿಗೆ ಕಳೆದು ಮರಳಿದ ಮೇಲೆ ಅಧಿಕಾರಿಗಳು ತಾವು ಫಿಟ್ ಮಾಡಿದ್ದ ವಸ್ತುಗಳನ್ನೆಲ್ಲಾ ಹೊತ್ತೊಯ್ದರು. ಈ ರೀತಿ ದೇಶಕ್ಕಾಗಿ ಪ್ರಾಣ ತೆತ್ತ ಯೋಧನ ಕುಟುಂಬಕ್ಕೆ ಅಕ್ಷರಶಃ ಅವಮಾನ ಮಾಡಲಾಗಿದೆ.

ಹುತಾತ್ಮ ಯೋಧನ ಶವ ಸಂಸ್ಕಾರಕ್ಕೆ ಮುಖ್ಯಮಂತ್ರಿಗಳು ಬರಲೇಬೇಕೆಂದು ಯೋಧನ ಕುಟುಂಬ ಹಠ ಹಿಡಿದಿತ್ತು. ಆದರೆ ಆಗ ಸಿಎಂ ಕುಟುಂಬದವರ ಜತೆ ದೂರವಾಣಿಯಲ್ಲಿ ಮಾತನಾಡಿ ಮುಂದೊಂದು ದಿನ ಖಂಡಿತಾ ನಿಮ್ಮನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments