Webdunia - Bharat's app for daily news and videos

Install App

ಖಟ್ಟರ್ ಗುರುಗ್ರಾಮವನ್ನು ಗುರುಜಾಮ್‌‌ ಆಗಿ ಪರಿವರ್ತಿಸಿದ್ದಾರೆ: ಆಪ್

Webdunia
ಶನಿವಾರ, 30 ಜುಲೈ 2016 (11:59 IST)
ಗುರ್‌ಗಾಂವ್‌ ನೀರಿನಲ್ಲಿ ಮುಳುಗಲು ಪರೋಕ್ಷವಾಗಿ ಅರವಿಂದ್ ಕೇಜ್ರಿವಾಲ್ ಕಾರಣ ಎಂದು ಆರೋಪಿಸಿದ್ದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ತಿರುಗೇಟು ನೀಡಿರುವ ಆಪ್, ಖಟ್ಟರ್ ಗುರುಗ್ರಾಮವನ್ನು ಗುರುಜಾಮ್ ಆಗಿ ಪರಿವರ್ತಿಸಿದ್ದಾರೆ ಎಂದು ಕುಹಕವಾಡಿದೆ.

ದೆಹಲಿ ಸರ್ಕಾರದ ಅಸಹಕಾರವೇ ಇದಕ್ಕೆಲ್ಲಾ ಕಾರಣ . ದೆಹಲಿಯ ನಜಾಫ್‍ಗಢ್ ಮೋರಿಯ ಮೂಲಕ ಗುರ್‍‍ಗಾಂವ್‍ನ ನೀರು ಹರಿದುಹೋಗಬೇಕಾಗಿತ್ತು. ಆದರೆ ಆ ಮೋರಿಯನ್ನು ದೆಹಲಿಯಲ್ಲಿ ಅರ್ಧ ಮುಚ್ಚಿರುವುದರಿಂದ ಗುರ್‍‍ಗಾಂವ್‍ನಲ್ಲಿ ನೀರು ಸ್ಥಗಿತಗೊಂಡು ಈ ಪರಿಯಲ್ಲಿ ಸಮಸ್ಯೆ ಉದ್ಭವಿಸಿದೆ ಎಂದು ಖಟ್ಟರ್ ಟ್ವಿಟರ್ ಮೂಲಕ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದರು.

ಖಟ್ಟರ್ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ,ಗುರ್‍‍ಗಾಂವ್‍ನ್ನು ಗುರುಗ್ರಾಮ್ ಎಂದು ಹೆಸರು ಬದಲಿಸಿದ ಕೂಡಲೇ ಅಭಿವೃದ್ಧಿ ಎನಿಸುವುದಿಲ್ಲ. ಅದಕ್ಕೆ ಸರಿಯಾದ ಯೋಜನೆ ಮತ್ತು ನಿರ್ವಹಣೆ ಬೇಕು ಎಂದಿದ್ದರು.

ಮತ್ತೀಗ ಖಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆಪ್ ವಕ್ತಾರ ಆಶುತೋಷ್,  ಹರಿಯಾಣಾ ಜನತೆ ಮುಖ್ಯಮಂತ್ರಿಯನ್ನು ಬಯಸಿದ್ದರು. ಆದರೆ ಸಿಕ್ಕಿದ್ದು ಕಟ್ಟರ್. ನೀವು ಕಟ್ಟರ್‌ನ್ನು ಮುಖ್ಯಮಂತ್ರಿಯಾಗಿಸಿದ್ದಕ್ಕೆ ಸಿಕ್ಕಿದ್ದು ಇದೇ. ಅವರು ಗುರುಗ್ರಾಮವನ್ನು ಗುರುಜಾಮ್ ಆಗಿ ಬದಲಾಯಿಸಿದ್ದಾರೆ ಎಂದು ಕಿಚಾಯಿಸಿದ್ದಾರೆ.

ಗುರುವಾರವಿಡಿ ಸುರಿದ ಭಾರಿ ಮಳೆಗೆ ಹರಿಯಾಣಾದ ಗುರ್‌ಗಾಂವ್ ಸಂಪೂರ್ಣವಾಗಿ ಜಲಾವೃತವಾಗಿದ್ದು ಸತತ 10 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ನಿನ್ನೆ ಸಂಜೆಯಿಂದ ಇಂದು ಬೆಳಗಿನವರೆಗೂ ಪರದಾಡಬೇಕಾಯಿತು.  ಈ ಅವ್ಯವಸ್ಥೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರೇ ಕಾರಣ ಎಂದು ಹರ್ಯಾಣಾದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಆರೋಪಿಸಿದ್ದರು.

ಕೇಂದ್ರದ ಜತೆಗಿನ ತೀವ್ರ ಜಟಾಪಟಿಯ ನಡುವೆ 12 ದಿನಗಳ ಬ್ರೇಕ್ ತೆಗೆದುಕೊಳ್ಳಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಸ್ಟ್ 1 ರಿಂದ 10 ದಿನಗಳ ಕಾಲ ವಿಪಾಸ್ಸನ ಧ್ಯಾನ (ಭಾರತದ ಪುರಾತನ ಧ್ಯಾನತಂತ್ರದ ಒಂದು ಮಾದರಿ)ಕ್ಕೆ ಶರಣಾಗಲಿದ್ದಾರೆ. ಈ ಸಂದರ್ಭದಲ್ಲಿ ಕೇಜ್ರಿವಾಲ್ ವೃತ್ತಪತ್ರಿಕೆ, ದೂರದರ್ಶನ ಮತ್ತು ಇತರ ಎಲ್ಲ ಮಾಧ್ಯಮಗಳಿಂದ ದೂರವಿರಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸರ್ಕಾರವನ್ನು ಸಂಭಾಳಿಸಲಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಸ್ಮಾ ಜಾರಿ ಮಾಡಿದ್ರೂ ಹೆದರಲ್ಲ: ಆ.5ರಂದು ಸಾರಿಗೆ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜಗದೀಪ್ ಧನಕರ್ ರಾಜೀನಾಮೆ: ಉಪ ರಾಷ್ಟ್ರಪತಿ ಹುದ್ದೆಯ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಆಯೋಗ

ಧರ್ಮಸ್ಥಳ ಪ್ರಕರಣ: ರಾಜ್ಯ ಸರ್ಕಾರದಿಂದ ಎಸ್‌ಐಟಿಗೆ 20 ಪೊಲೀಸ್ ಅಧಿಕಾರಿಗಳ ನಿಯೋಜನೆ

ಬಾ ನಲ್ಲ ಮಧುಚಂದ್ರಕೆ ಪ್ರಕರಣ: ಪತಿ ಕೊಂದು ಜೈಲು ಸೇರಿದ್ದ ಸೋನಂ ನಡವಳಿಕೆಗೆ ಶಾಕ್

ಸುಳ್ಳು, ವಂಚನೆ ಮಾಡೋದೇ ಕಾಂಗ್ರೆಸ್ ಸರ್ಕಾರದ ಕೆಲಸ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments