'ದೇಶದಲ್ಲಿ ಮೋದಿ ಅಲೆ' ಇರುವುದನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಲ್ಲಗಳೆದಿದ್ದು ಇದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು 'ಇಡೀ ದೇಶ ಮೋದಿ ಅಲೆಯಲ್ಲಿ ತೇಲುತ್ತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಮೋದಿ ಅಲೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುತ್ತದೆ' ಎಂಬ ವಾದವನ್ನು ಕೂಡ ಅವರು ನಿರಾಕರಿಸಿದ್ದಾರೆ.
"ನಾನು ಈ ಮಹಾನ್ ದೇಶದ ಪ್ರಜೆ ಎಂಬ ನನ್ನ ಹಕ್ಕನ್ನು ಚಲಾಯಿಸಲು ನಾನು ಗೌಹಾತಿಗೆ ಬಂದಿದ್ದೇನೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಪ್ರಕ್ರಿಯೆ ದೃಢವಾಗಿ ಸ್ಥಾಪನೆಯಾಗಿದೆ ಎಂಬುದು ನನ್ನ ನಂಬಿಕೆ. ಎಲ್ಲಾ ನಾಗರಿಕರು ತಮ್ಮ ಮತವನ್ನು ಚಲಾಯಿಸುವಂತೆ ನಾನು ಕೇಳಿಕೊಳ್ಳುತ್ತೇನೆ " ಎಂದು ಪ್ರಧಾನಿ ಹೇಳಿದರು.
ಎಲ್ಜಿಬಿಐ ವಿಮಾನನಿಲ್ದಾಣದಿಂದ ಖಾನಾಪುರದ ಆಟದ ಮೈದಾನಕ್ಕೆ ಚಾಪರ್ನಲ್ಲಿ ಆಗಮಿಸಿದ ಪ್ರಧಾನಿ, ಅಲ್ಲಿಂದ ಕಪ್ಪು ಬಿಎಂಡಬ್ಲ್ಯುಕಾರನ್ನು ತಾವೇ ಚಲಾಯಿಸುತ್ತ ಸುಮಾರು ಮೂರು ಕೀ ಮೀ ದೂರದ ಗೌಹಾತಿ ಲೋಕಸಭಾ ಕ್ಷೇತ್ರದ 188 ನೇ ಸಂಖ್ಯೆಯ ಮತಗಟ್ಟೆಗೆ ಬಂದು 479 ನೆಯವರಾಗಿ ಮತ ಚಲಾಯಿಸಿದರು.
480 ನೇ ಮತದಾನಿಯಾಗಿ ಪತ್ನಿ ಅವರನ್ನು ಹಿಂಬಾಲಿಸಿದರು. ಮತದಾನದ ಬೂತಿನ ಒಳಗೆ 4 ನಿಮಿಷ ಇದ್ದ ಅವರು ಹೊರಗೆ ಬಂದು 2 ನಿಮಿಷ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಅವರು ಮತಗಟ್ಟೆಗೆ ಬಂದು-ಹೋದ ಘಳಿಗೆ ಕೇವಲ 9 ನಿಮಿಷಗಳಾಗಿತ್ತು.