Select Your Language

Notifications

webdunia
webdunia
webdunia
webdunia

ಮೋದಿ ಪ್ರತಿಯೊಬ್ಬ ಭಾರತೀಯನ ಪ್ರಧಾನಿ: ಮನಮೋಹನ್ ಸಿಂಗ್

ಮೋದಿ ಪ್ರತಿಯೊಬ್ಬ ಭಾರತೀಯನ ಪ್ರಧಾನಿ: ಮನಮೋಹನ್ ಸಿಂಗ್
ನವದೆಹಲಿ , ಶನಿವಾರ, 13 ಫೆಬ್ರವರಿ 2016 (15:17 IST)
ಗೋಮಾಂಸ ವಿವಾದ, ದಾದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಮೌನವಹಿಸಿರುವುದನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿಕಾರಿದ್ದಾರೆ. ಜತೆಗೆ ನಮ್ಮ ಬಗ್ಗೆ ಕಾಳಜಿ ತೋರುವ ಪ್ರಧಾನಿ ಇದ್ದಾನೆ ಎಂದು ಪ್ರತಿಯೊಬ್ಬ ಭಾರತೀಯನಿಗೆ ವಿಶ್ವಾಸ ನೀಡಿ, ನೀವು ಪ್ರತಿಯೊಬ್ಬ ಭಾರತೀಯರ ಪ್ರಧಾನಿ ಎಂದು ಮೋದಿಯವರಿಗೆ ಸಲಹೆ ನೀಡಿದ್ದಾರೆ. 

 
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇರುವ "ಅನಗತ್ಯ ಕಟುತ್ವ" ಕ್ಕಾಗಿ ಬಿಜೆಪಿಯನ್ನು ಹೊಣೆಗಾರರನ್ನಾಗಿಸಿರುವ ಅವರು ಆಡಳಿತವನ್ನು ನಿರ್ವಹಿಸಲು ವಿರೋಧ ಪಕ್ಷ ಇರಬೇಕು ಎಂದು ಬಿಜೆಪಿಗೆ ಅನ್ನಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. 
 
ದೇಶವಾಸಿಗಳು ಸಾರ್ವಜನಿಕ ಅಭಿಪ್ರಾಯವನ್ನು ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ಮುಂದಾಳತ್ವವನ್ನು ನಿರೀಕ್ಷಿಸುತ್ತಾರೆ. ಆದರೆ ಪ್ರಧಾನಿ ಇಂತಹ ಸಮಯದಲ್ಲಿ ಮಾತನಾಡುತ್ತಲೇ ಇಲ್ಲ. ಗೋಮಾಂಸ ಪ್ರಕರಣವಾಗಲಿ, ಮುಝಪ್ಫರ್‌ನಗರದ ಘಟನೆಯಾಗಿರಲಿ ಅಥವಾ ಮತ್ಯಾವುದೇ ಪ್ರಮುಖ ಘಟನೆಯಾಗಿರಲಿ ಮೋದಿ ಮಾತ್ರ ಈ ವಿಷಯಗಳಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂದು ಸಿಂಗ್ ಆಪಾದಿಸಿದ್ದಾರೆ.

Share this Story:

Follow Webdunia kannada