ಪತ್ನಿಯನ್ನು ತನ್ನ ಗೆಳೆಯನ ಜತೆಯಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡ ವ್ಯಕ್ತಿಯೊಬ್ಬ ಅವರಿಬ್ಬರನ್ನು ಮಾರಣಾಂತಿಕವಾಗಿ ಥಳಿಸಿದ ಪರಿಣಾಮ ಅವರಿಬ್ಬರು ಸಹ ಅಸುನೀಗಿದ್ದಾರೆ. ಇದರ ಘೋರ ಪರಿಣಾಮ ದಂಪತಿಗಳ ಮೂವರು ಮಕ್ಕಳ ಮೇಲಾಗಿದ್ದು, ತಾಯಿಯನ್ನು ಕಳೆದುಕೊಂಡಿರುವ, ತಂದೆಯಿಂದಲೂ ದೂರವಾಗಿರುವ ಮೂವರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
ಬಾಗ್ ಸೇವಾನಿಯಾದ ಅರವಿಂದ್ ವಿಹಾರ್ ಕಾಲೋನಿ ನಿವಾಸಿ ಗಣೇಶ್, ತನ್ನ ಪತ್ನಿ ರಾಜಕುಮಾರಿ ಮತ್ತು ಮೂವರು ಪುಟ್ಟ ಮಕ್ಕಳ ಜತೆಗೆ ವಾಸವಾಗಿದ್ದ. ಆತನ ಸ್ನೇಹಿತ ರಾಜು ಸದಾ ಅವರ ಮನೆಗೆ ಭೇಟಿ ನೀಡುತ್ತಿದ್ದ.
ಕಳೆದ ಗುರುವಾರ ಗಣೇಶ್ ವಿಪರೀತ ಕುಡಿದಿದ್ದು ತನ್ನ ಕೋಣೆಯಲ್ಲಿ ಮಲಗಿದ್ದ. ಆತನ ಪತ್ನಿ, ಮಕ್ಕಳು ( ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳು) ಮತ್ತು ಗೆಳೆಯ ರಾಜು ಮನೆಯ ಹಜಾರದಲ್ಲಿ ಮಲಗಿದ್ದರು.
ಸುಮಾರು 10.30 ರ ಸುಮಾರಿಗೆ ತನ್ನ ಕೋಣೆಯಿಂದ ಹೊರಗೆ ಬಂದ ಆತ ಪತ್ನಿ ಮತ್ತು ಗೆಳೆಯ ರಾಜುವನ್ನು ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ್ದಾನೆ. ಅದರಿಂದ ಕೆರಳಿದ ಆತ ಲಾಠಿಯನ್ನೆತ್ತಿಕೊಡು ಅವರಿಬ್ಬರಿಗ ಮನಬಂದಂತೆ ಥಳಿಸಿದ್ದಾನೆ.
ತೀವೃ ಗಾಯಗೊಂಡಿದ್ದ ರಾಜು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದರೆ, ರಾಜಕುಮಾರಿ ಶುಕ್ರವಾರ ಬೆಳಿಗ್ಗೆ ಅಸುನೀಗಿದಳು.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಗಣೇಶನನ್ನು ಬಂಧಿಸಿದ್ದಾರೆ. ಆದರೆ ಯಾವ ತಪ್ಪು ಮಾಡದ ಅಮಾಯಕ ಮಕ್ಕಳು ಅನಾಥರಾಗಿವೆ.