Webdunia - Bharat's app for daily news and videos

Install App

ಚಲಿಸುತ್ತಿರುವ ಬಸ್‌ನಲ್ಲಿ ಅಪ್ರಾಪ್ತಳಿಗೆ ತಾಳಿ ಕಟ್ಟಲು ಯತ್ನಿಸಿದ ಯುವಕನ ಬಂಧನ

Webdunia
ಮಂಗಳವಾರ, 21 ಜುಲೈ 2015 (18:45 IST)
ಚಲಿಸುತ್ತಿರುವ ಬಸ್‌ನಲ್ಲಿಯೇ ಅಪ್ರಾಪ್ತಳಿಗೆ ಕುತ್ತಿಗೆಗೆ ತಾಳಿ ಕಟ್ಟಲು ಪ್ರಯತ್ನಿಸಿದ ಘಟನೆ ತಮಿಳುನಾಡಿನ ಮಧುರೈ ಬಳಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
 
ಮೆಲಾವಲಾವು ನಿಂದ ಮೆಲೂರುಗೆ ತೆರಳುತ್ತಿದ್ದ ಸರಕಾರಿ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ.
 
ಮೆಲೂರಿನಲ್ಲಿ ವೈನ್‌ಶಾಪ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಕಲ್ಲಾನೈ, ಮತ್ತೊಂದು ಸಮುದಾಯದ 12ನೇ ತರಗತಿಯಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. 
 
ಮಂಗಳವಾರದಂದು ಬೆಳಿಗ್ಗೆ ಕಲ್ಲಾನೈ ತನ್ನ ಶರ್ಟ್‌ ಜೇಬಿನಲ್ಲಿ ತಾಳಿಯನ್ನಿಟ್ಟುಕೊಂಡು ಬಸ್ ಏರಿದ. ಬಸ್ ಮೆಲೂರಿಗೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿನಿಯ ಬಳಿ ಬಂದು ಆಕೆಯ ಕುತ್ತಿಗೆಗೆ ತಾಳಿ ಕಟ್ಟಲು ಯತ್ನಿಸಿದ.   
 
ಆರೋಪಿಯ ವರ್ತನೆಯಿಂದ ಕಂಗಾಲಾದ ಬಾಲಕಿ ಸಹಾಯಕ್ಕಾಗಿ ಕೂಗಿದ್ದಾಳೆ. ಬಾಲಕಿಯ ಕೂಗು ಕೇಳಿ ನೆರವಿಗೆ ಬಂದ ಪ್ರಯಾಣಿಕರು ಆರೋಪಿ ಕಲ್ಲಾನೈಯನ್ನು ಹಿಡಿದು ಮನಬಂದಂತೆ ಥಳಿಸಿ ಮೆಲೂರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.   
 
ಮೆಲೂರು ಪೊಲೀಸರು ಆರೋಪಿ ಕಲ್ಲಾನೈ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments