ಖಾಸಗಿ ಕಂಪನಿಯ ಕಂಪ್ಯೂಟರ್ ಆಪರೇಟರ್ ಒಬ್ಬರು ತಾನು ಸಾಕಿದ್ದ ನಾಯಿಗೆ ಆಧಾರ್ ಕಾರ್ಡ್ ಮಾಡಿಸಲು ಮುಂದಾಗಿ ಸಿಕ್ಕಿಬಿದ್ದಿದ್ದಾರೆ.
ಘಾಜಿಪುರ್ ಜಿಲ್ಲೆಯ ರಾಜಪುರ ಗ್ರಾಮದಲ್ಲಿ ಮಾರ್ಚ್ ಮೊದಲ ವಾರ ಆಯೋಜಿಸಲಾಗಿದ್ದ ಆಧಾರ್ ಕಾರ್ಡ್ ನೋಂದಣಿ ಶಿಬಿರದಲ್ಲಿ ತನ್ನ ನಾಯಿಯ ಭಾವಚಿತ್ರವನ್ನು ಅಪ್ಲೋಡ್ ಮಾಡಿದ ಮನೀಶ್ ಕುಮಾರ್ ನಕಲಿ ವಿವರಗಳನ್ನು ಭರ್ತಿ ಮಾಡಿದ್ದ.
ಅದೀಗ ಮೇಲಾಧಿಕಾರಿಗಳ ಗಮನಕ್ಕೆ ಬಂದಿದ್ದು ಕಾರ್ಡ್ನ್ನು ವಜಾ ಮಾಡಲಾಗಿದ್ದು ಮನೀಶ್ ಕುಮಾರ್ ಮೇಲೆ ಕೇಸ್ ದಾಖಲಾಗಿದೆ.
ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಬಂದಿರುವ ವರದಿಗಳ ಪ್ರಕಾರ ಕಂಪ್ಯೂಟರ್ ಆಪರೇಟರ್ ವಿರುದ್ಧ ಐಪಿಸಿ ವಿಭಾಗ 479ರ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ.