Select Your Language

Notifications

webdunia
webdunia
webdunia
webdunia

ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಜೈ ಶ್ರೀರಾಮ್ ಹೇಳುವಂತೆ ಒತ್ತಾಯ

ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಜೈ ಶ್ರೀರಾಮ್ ಹೇಳುವಂತೆ ಒತ್ತಾಯ
ಹರಿಯಾಣಾ , ಶನಿವಾರ, 28 ಮಾರ್ಚ್ 2015 (18:07 IST)
ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯಲಾಗುವ ಹಿಂಸಾಚಾರದ ಘಟನೆಗಳ ಖಂಡಿಸಿದ್ದ ಪ್ರಧಾನಿ ಮೋದಿ ಎಲ್ಲಾ ಧಾರ್ಮಿಕ ಗುಂಪುಗಳ ರಕ್ಷಣೆಗೆ ತಾವು ಕಟಿಬದ್ಧರು ಎಂದು ಪ್ರತಿಜ್ಞೆ ಮಾಡಿದ್ದರು. 
 
ಆದರೆ, ಕಳೆದೊಂದು ತಿಂಗಳಲ್ಲಿ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ ಎಂಬುದನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿರುವ ಕೆಲ ದುಷ್ಕರ್ಮಿಗಳು ನಿರಂತರವಾಗಿ ಹಲ್ಲೆ ನಡೆಸಿ ಜೈ ಶ್ರೀರಾಮ್ ಎಂದು ಹೇಳು ಎಂದು ಹಿಂಸೆ ನೀಡುತ್ತಿರುವುದು ವಿಡಿಯೋದಲ್ಲಿದೆ. 
 
ಪೀಡಿತ ಅನ್ಯಕೋಮಿನ ವ್ಯಕ್ತಿಯಾಗಿದ್ದು ಆತನನ್ನು ಧರ್ಮ ಪರಿವರ್ತನೆ ಮಾಡಿಕೊಂಡು ಹಿಂದೂವಾಗುವಂತೆ ಆರೋಪಿಗಳು ಒತ್ತಾಯಿಸುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. 
 
ಅಮಾಯಕ ವ್ಯಕ್ತಿಯ ಮೇಲೆ ದಾರುಣವಾಗಿ ಹಲ್ಲೆ ನಡೆಸುತ್ತ ಕತ್ತರಿಸುವ ಉದ್ದೇಶದಿಂದ ಹಸುಗಳನ್ನು ಸಾಗಿಸುತ್ತಿದ್ದ ತಂಡದಲ್ಲಿರುವ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸುವಂತೆ ಕೇಳಲಾಗುತ್ತಿದೆ.

Share this Story:

Follow Webdunia kannada