Webdunia - Bharat's app for daily news and videos

Install App

ನೋಡ ನೋಡುತ್ತಿದ್ದಂತೆ ಕಲ್ಯಾಣಿಯಲ್ಲಿ ಮುಳುಗಿದ ವ್ಯಕ್ತಿ.. ಸಹಾಯಕ್ಕೆ ಬರದೇ ವಿಡಿಯೋ ತೆಗೆಯುತ್ತಿದ್ದ ಜನ

Webdunia
ಗುರುವಾರ, 20 ಏಪ್ರಿಲ್ 2017 (19:38 IST)
ಯಾವುದೇ ಅಪಘಾತದ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡಬೇಕೆಂದು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಮಾತ್ರ ಆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇತ್ತೀಚೆಗೆ ಚಿತ್ರದುರ್ಗದಲ್ಲಿ ಅಪಘಾತ ನಡೆದು ಗಾಯಾಳುಗಳು ನರಳುತ್ತಿದ್ದರೂ ಜನ ನೆರವಿಗೆ ಬಂದಿರಲಿಲ್ಲ. ನೆರವು ನೀಡುವ ಬದಲು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಇಂಥದ್ದೇ ಒಂದು ಘಟನೆ ಕೋಲಾರದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ಕಲ್ಯಾಣಿಯಲ್ಲಿ ಮುಳುಗುತ್ತಿದ್ದರೂ ನೆರವಿಗೆ ಬಾರದೇ ಸಮೀಪವೇ ನಿಂತು ವಿಡಿಯೋ ಮಾಡುತ್ತಿದ್ದ ಘಟನೆ ಕೋಲಾರದ ಟೇಕಲ್ ರಸ್ತೆಯಲ್ಲಿರುವ ಕಲ್ಯಾಣಿಯಲ್ಲಿ ನಡೆದಿದೆ. ಮೃತವ್ಯಕ್ತಿಯನ್ನ 70 ವರ್ಷದ ಹಾರೋಹಳ್ಳಿ ನಿವಾಸಿ ನಂಜಪ್ಪ ಎಂದು ಗುರ್ತಿಸಲಾಗಿದೆ.

ಸಹಾಯಕ್ಕಾಗಿ ಈ ವ್ಯಕ್ತಿ ಎಷ್ಟೇ ಕೈಚಾಚಿದರೂ ಸಮೀಪವಿದ್ದ ಜನ ನೆರವಿಗೆ ಬರಲಿಲ್ಲ. ಅದರ ಬದಲು ಮೊಬೈಲ್`ಗಳಲ್ಲಿ ವಿಡಿಯೋ ತೆಗೆಯುತ್ತಿದ್ದರು. ಪಾಪ ಬಡ ಜೀಬ ನೀರಿನಲ್ಲೆ ಪ್ರಾಣ ಬಿಟ್ಟಿತು. ಅಗ್ನಿಶಾಮಕ ನೀರಿನಲ್ಲಿ ಶವಕ್ಕಾಗಿ ಹುಡುಕಾಟ ನಡೆಸಿದೆ.

 

 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments