Webdunia - Bharat's app for daily news and videos

Install App

ತಾಯಿಯನ್ನು ಕೊಂದು ನಿರಾಂತಕವಾಗಿ ನಿದ್ದೆಗೆ ಜಾರಿದ

Webdunia
ಗುರುವಾರ, 26 ಮಾರ್ಚ್ 2015 (15:02 IST)
ತಾಯಿ- ಮಕ್ಕಳ ಸಂಬಂಧ ಎನ್ನುವುದು ಎಲ್ಲ ಸಂಬಂಧಗಳಿಗಿಂತ ಪವಿತ್ರವಾದುದು ಎಂದು ಹೇಳಲಾಗುತ್ತದೆ. ಆದರೆ ಈ ಸಂಬಂಧ ಗರಿಮೆಯನ್ನೇ ಬುಡಮೇಲು ಮಾಡುವಂತ ಕೃತ್ಯವನ್ನು ಮಗನೊಬ್ಬನು ಎಸೆದಿದ್ದಾನೆ. ಆತ ತನ್ನ ಹೆತ್ತ ತಾಯಿಯನ್ನೇ ಕೊಂದಿದ್ದಾನೆ. ಅದು ಸಹ 70 ವರ್ಷದ ಅಸಹಾಯಕ ವೃದ್ಧೆಯನ್ನು. 

ಈ ಘಟನೆ ನಡೆದಿರುವುದುರು ಆಗ್ರಾದ ಸಮೀಪದ ದವ್ಲಿ ಎಂಬ ಗ್ರಾಮದಲ್ಲಿ. ಮಂಗಳವಾರ ರಾತ್ರಿ ತಾಯಿ (ಭೂದೇವಿ) ತನ್ನ ಕೋಣೆಯೊಂದರಲ್ಲಿ ಮಲಗಿದ್ದ ವೇಳೆ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಆಕೆಯ ಮಗ ರಘುನಾಥ್ ಅಲ್ಲಿಗೆ ಬಂದಿದ್ದಾನೆ ಮತ್ತು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಮತ್ತೆ ತನ್ನ ಕೋಣೆಗೆ ತೆರಳಿ ನಿರಾಂತಕವಾಗಿ ನಿದ್ದೆ ಹೋಗಿದ್ದಾನೆ.  ಘಟನೆ ನಡೆದ ಸಮಯದಲ್ಲಿ ಮೃತಳ ಉಳಿದ ಮೂವರು ಮಕ್ಕಳಾದ ಜಗದೀಶ್, ರತನ್, ರಘುವೀರ್ ಪ್ರತ್ಯೇಕ ಕೋಣೆಯೊಂದರಲ್ಲಿ ಮಲಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
 
ವಿಚಾರಣೆ ವೇಳೆ ರಘುನಾಥ್ ತನ್ನ ಆರೋಪವನ್ನು ಒಪ್ಪಿಕೊಂಡಿದ್ದಾನೆ ಮತ್ತು ಹತ್ಯೆಗೆ ಬಳಸಿದ್ದ ಆಯುಧವನ್ನು ಸಹ ತೋರಿಸಿದ್ದಾನೆ. ಪೊಲೀಸರ ಪ್ರಕಾರ ಅವಿವಾಹಿತನಾಗಿರುವ ಆರೋಪಿ ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಆತನಿಗೆ ಔಷಧೋಪಚಾರ ಜಾರಿಯಲ್ಲಿದೆ. ಆತ ಮಾನಸಿಕ ಅಸ್ವಸ್ಥತೆಯ ಪರಿಣಾಮವಾಗಿ ಈ ಕೃತ್ಯವನ್ನೆಸಗಿದನೋ ಅಥವಾ ಕೃತ್ಯದ ಹಿಂದೆ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments