Select Your Language

Notifications

webdunia
webdunia
webdunia
webdunia

ಶಾಕಿಂಗ್: ತಂಗಿ ಮದುವೆ ಜವಾಬ್ದಾರಿ ತಪ್ಪಿಸಿಕೊಳ್ಳಲು ಈತ ಮಾಡಿದ್ದೇನು ಗೊತ್ತಾ?

ಶಾಕಿಂಗ್: ತಂಗಿ ಮದುವೆ ಜವಾಬ್ದಾರಿ ತಪ್ಪಿಸಿಕೊಳ್ಳಲು ಈತ ಮಾಡಿದ್ದೇನು ಗೊತ್ತಾ?
ನವದೆಹಲಿ , ಗುರುವಾರ, 9 ಮಾರ್ಚ್ 2017 (14:54 IST)
ಸಹೋದರಿಯ ಮದುವೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳ ಬಯಸಿದ ಯುವಕನೋರ್ವ ಆಕೆಯನ್ನು ಹತ್ಯೆಗೈದ ಹೇಯ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ. 

ಮಧುವಿಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಸನ್ಪುರ್ ಗ್ರಾಮದಲ್ಲಿ ಈ ಹೇಯಕೃತ್ಯ ನಡೆದಿದ್ದು ಬುಧವಾರ ಸಂಜೆ ಇದು ಬೆಳಕಿಗೆ ಬಂದಿದೆ, 
 
ಘಟನೆಯ ಬಗ್ಗೆ ಫೋನ್ ಮೂಲಕ ಮಾಹಿತಿ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಹೋದಾಗ ಯುವತಿಯ ದೇಹ ಆಕೆಯ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕತ್ತು ಮತ್ತು ಕೈ ಮೇಲೆ ಗಾಯದ ಗುರುತುಗಳಿದ್ದವು.
 
ಮನೆಯಲ್ಲಿ ಯಾರು ಕೂಡ ಬಲವಂತದಿಂದ ನುಗ್ಗಿದ ಗುರುತುಗಳಿರಲಿಲ್ಲ. ಆದರೆ ಕೊಲೆಗಾರ ಇದೊಂದು ಆತ್ಮಹತ್ಯೆ ಎಂದು ನಿರೂಪಿಸಲು ಸಾಕಷ್ಟು ತಂತ್ರ ರೂಪಿಸಿದ್ದ.
 
ಅನುಮಾನಗೊಂಡ ಪೊಲೀಸರು ಮೃತಳ ಸಹೋದರ ತಪಸ್ ಬರ್ಮನ್‌ನನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿದ್ದಿದೆ. ಆಕೆಯ ವ್ಹೇಲ್‌ನಿಂದ ಕುತ್ತಿಗೆ ಬಿಗಿದು ಕೊಂದೆ. ಆಕೆಯ ಸಾವನ್ನು ಖಚಿತಪಡಿಸಿಕೊಳ್ಳಲು ಮೂಗು ಮತ್ತು ಬಾಯಿಯನ್ನು ಸಹ ಗಟ್ಟಿಯಾಗಿ ಒತ್ತಿ ಹಿಡಿದೆ ಎಂದಾತ ಬಾಯ್ಬಿಟ್ಟಿದ್ದಾನೆ
  
ಮೃತಳು ಆರೋಪಿಯ ಸಂಬಂಧಿಕರ ಮಗಳಾಗಿದ್ದು ಸಂಬಂಧದಲ್ಲಿ ಸೋದರಿಯಾಗಬೇಕು. 2008ರಲ್ಲಿ ಯುವತಿಯ ತಂದೆ ತೀರಿ ಹೋದಾಗ ತಪಸ್ ಪೋಷಕರು ಆಕೆಯನ್ನು ಮನೆಗೆ ತಂದು ಸಾಕಿಕೊಂಡಿದ್ದರು. ಆಗ ಆಕೆಗೆ ಕೇವಲ 10 ವರ್ಷ ವಯಸ್ಸು. ಮತ್ತೀಗ ಆಕೆ 19 ವರ್ಷದವಳಾಗಿದ್ದಳು. ತಪಸ್ ಒಬ್ಬನೇ ಮನೆಯ ಜವಾಬ್ದಾರಿ ನಿಭಾಯಿಸಬೇಕಿತ್ತು. ಮತ್ತೀಗ ತಂಗಿಯ ಮದುವೆ ಜವಾಬ್ದಾರಿ ಸಹ ತನ್ನ ಹೆಗಲಿಗೆ ಏರುವುದೆಂಬ ಚಿಂತೆಯಲ್ಲಿದ್ದ ಆತ ಇದೇ ಕಾರಣಕ್ಕೆ ಆಗಾಗ ತನ್ನ ತಾಯಿ ಮತ್ತು ಪತ್ನಿ ಜತೆ ಜಗಳವಾಡುತ್ತಿದ್ದ. 
 
ಆಕೆಯನ್ನು ಮುಗಿಸಿದರೆ ಜವಾಬ್ದಾರಿಯಿಂದ ಹೊರಬರಬಹುದೆಂದು ಯೋಚಿಸಿದ ಆತ ಬುಧವಾರ ಆಕೆಯನ್ನು ಕೊಲೆಗೈದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡೂ ಕ್ಷೇತ್ರಗಳಲ್ಲಿ 100ಕ್ಕೆ ನೂರರಷ್ಟು ಗೆಲ್ಲುತ್ತೇವೆ: ಯಡಿಯೂರಪ್ಪ