Select Your Language

Notifications

webdunia
webdunia
webdunia
webdunia

ಪತ್ನಿ ಹೆಚ್ಚುವರಿ ವರದಕ್ಷಿಣೆ ತಂದಿಲ್ಲವೆಂದು ಮಗಳನ್ನು ಬಾವಿಗೆಸೆದ ಪಾಪಿ ತಂದೆ

ಪತ್ನಿ ಹೆಚ್ಚುವರಿ ವರದಕ್ಷಿಣೆ ತಂದಿಲ್ಲವೆಂದು ಮಗಳನ್ನು ಬಾವಿಗೆಸೆದ ಪಾಪಿ ತಂದೆ
ಹೈದರಾಬಾದ್ , ಶುಕ್ರವಾರ, 5 ಫೆಬ್ರವರಿ 2016 (11:15 IST)
ಪತ್ನಿ ಹೆಚ್ಚುವರಿ ವರದಕ್ಷಿಣೆ ತಂದಿಲ್ಲವೆಂಬ ಕಾರಣಕ್ಕೆ ಆಕ್ರೋಶಗೊಂಡ ಪಾಪಿ ಪತಿಯೊಬ್ಬ ತನ್ನ ಮೂರು ವರ್ಷದ ಮಗಳನ್ನು ಬಾವಿಗೆಸೆದು ಕೊಲೆಗೈಯ್ದ ಅಮಾನವೀಯ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಕುಶೆನ್‌‌ಪಲ್ಲಿಯಲ್ಲಿ ನಡೆದಿದೆ.

ಆರೋಪಿಯನ್ನು ಸಿ.ಹೆಚ್. ತಿರುಪತಿ ಎಂದು ಗುರುತಿಸಲಾಗಿದ್ದು ಫೆಬ್ರವರಿ 2 ರಂದು ತನ್ನ ಮಗಳನ್ನು ಕೃಷ್ಣಪಲ್ಲಿ  ಎಂಬ ಗ್ರಾಮಕ್ಕೆ ಕರೆದೊಯ್ದು ಬಾವಿಗೆ ಎಸೆದಿದ್ದಾನೆ.  ನಿನ್ನೆ ರಾತ್ರಿ ಬಾಲಕಿಯ ದೇಹ ಬಾವಿಯಲ್ಲಿ ತೇಲಿ ಬಂದಾಗ ಅದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
 
ಮಗುವಿನ ದೇಹವನ್ನು ಬಾವಿಯಿಂದ ಹೊರತೆಗೆದಿರುವ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
 
ವರದಕ್ಷಿಣೆ ಹಣಕ್ಕಾಗಿ ಪತ್ನಿಯ ಜತೆ ಸದಾ ಜಗಳವಾಡುತ್ತಿದ್ದ ಆತ ಇದೇ ಕಾರಣಕ್ಕೆ ಮಗಳನ್ನು ಕೊಂದಿದ್ದಾನೆ ಎಂದು ನನ್ನೆಲ್ ಪೊಲೀಸ್ ಠಾಣಾ ಸಬ್-ಇನ್ಸಪೆಕ್ಟರ್ ಎ ತಿರುಪತಿ ತಿಳಿಸಿದ್ದಾರೆ.
 
ಆರೋಪಿಯ ಪತ್ನಿ ರಮ್ಯಾ ನೀಡಿರುವ ದೂರಿದ ಆಧಾರದ ಮೇಲೆ ಆರೋಪಿಯ ವಿರುದ್ಧ  ಕೊಲೆ ಮತ್ತು ವರದಕ್ಷಿಣೆ ಹಿಂಸೆ ಪ್ರಕರಣವನ್ನು ದಾಖಲಿಸಲಾಗಿದೆ. 
 
ತವರಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಪತಿ, ತರದಿದ್ದರೆ ಮಗಳನ್ನು ಕೊಲ್ಲುವುದಾಗಿ ಸದಾ ಬೆದರಿಕೆ ಒಡ್ಡುತ್ತಿದ್ದ ಎಂದು ನೊಂದ ತಾಯಿ ರಮ್ಯಾ ದೂರಿನಲ್ಲಿ ಹೇಳಿದ್ದಾಳೆ. 
 
ಪ್ರಾಥಮಿಕ ತನಿಖೆಯ ಪ್ರಕಾರ ತಿರುಪತಿ ಮಗಳನ್ನು ಕೊಂದಿದ್ದು ಸಾಬೀತಾಗಿದ್ದು, ಆತ ಪರಾರಿಯಾಗಿರುವುದು ಇದನ್ನು ಪುಷ್ಠೀಕರಿಸಿವೆ. 
 

Share this Story:

Follow Webdunia kannada