Webdunia - Bharat's app for daily news and videos

Install App

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿ ರಕ್ಷಣೆ: ಆಕೆಯನ್ನೇ ವಿವಾಹವಾಗಲು ನಿರ್ಧರಿಸಿದ ಯುವಕ

Webdunia
ಶುಕ್ರವಾರ, 7 ಜುಲೈ 2017 (16:27 IST)
ನವದೆಹಲಿ: ಇದೊಂದು ವಿಚಿತ್ರವೆಂದರೂ ಸತ್ಯ ಸಂಗತಿ. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿಯೊಬ್ಬರನ್ನು ಪ್ರೀತಿಸಿದ ಯುವಕ ಕೊನೆಗೂ ಆಕೆಯನ್ನು ಪೊಲೀಸರ ಸಹಾಯದಿಂದ ರಕ್ಷಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅಷ್ಟೇ ಅಲ್ಲ ಆಕೆಯನ್ನು ವಿವಾಹವಾಗಲೂ ಯುವಕ ನಿರ್ಧರಿಸಿದ್ದಾನೆ.
 
ಶುಭಿ ಎಂಬ ಯುವತಿ ಮಾರುಕಟ್ಟೆಯೊಂದರಲ್ಲಿ ಸಾಗರ್ ಎಂಬಾತನನ್ನು ಭೇಟಿಯಾಗುತ್ತಾರೆ. ಶುಭಿಯ ಮೊದಲ ನೋಟಕ್ಕೆ ಸಾಗರ್ ಬೌಲ್ಡ್. ಬಳಿಕ ಅಕೆ ಓರ್ವ ವೇಶ್ಯೆ ಎಂದು ಸಾಗರ್ ಗೆ ತಿಳಿಯಿತು. ಆದರೂ ವಿಚಲಿತನಾಗದ ಸಾಗರ್ ಆಕೆಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ವೇಶ್ಯಾಗ್ರಹದಿಂದ ಪಾರುಮಾಡಿ ರಕ್ಷಿಸಲು ಮುಂದಾದ.  ಜಿಬಿ ರೋಡ್ ನಲ್ಲಿನ ವೇಶ್ಯಾಗ್ರಹಕ್ಕೆ ತೆರಳಿ  ಶುಭಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಹಾಗೂ ಆಕೆಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಕೇಳಿದ್ದಾನೆ. ಆದರೆ ಅಲ್ಲಿನ ಮುಖ್ಯಸ್ಥ ಸಾಗರ್ ಮಾತನ್ನು ಕಿವಿಮೇಲೆ ಹಾಕಿಕೊಂಡಿಲ್ಲ.
 
ಬಳಿಕ ಸಾಗರ್ ಮಹಿಳಾ ಆಯೋಗದ ಮುಂದೆ ತನ್ನ ಕಥೆ ಹೇಳಿ. ಅವರ ಸಹಾಯಪಡೆದು ಪೊಲೀಸರ ಜತೆಗೂಡಿ ವೇಶ್ಯಾಗ್ರಹದ ಮೇಲೆ ದಾಳಿ ಮಾಡಿ ಯುವತಿಯನ್ನು ರಕ್ಷಿಸಿದ್ದಾನೆ. ಅಲ್ಲದೇ ಸಾಗರ್ ತಾನು ಪ್ರೀತಿಸುತ್ತಿರುವ ಶುಭಿಯನ್ನೇ ವಿವಾಹವಾಗಲು ಸಿದ್ಧತೆ ನಡೆಸಿದ್ದು, ಶುಭಿ ಹೊಸ ಜೀವನಕ್ಕೆ ಯಾವುದೇ ದಕ್ಕೆಯಾಗದಂತೆ ಪೊಲೀಸರೇ ರಕ್ಷಣೆ ನೀಡಲಿದ್ದಾರೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

94 ವರ್ಷಗಳ ಇತಿಹಾಸದಲ್ಲಿ ಜೂನ್‌ ತಿಂಗಳಲ್ಲೇ ಮೊದಲ ಭಾರೀ ಭರ್ತಿಯಾದ ಕೆಆರ್‌ಎಸ್‌, ಬಾಗಿನ ಅರ್ಪಣೆ

ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದ ಮಲ್ಲಿಕಾರ್ಜುನ ಖರ್ಗೆ: ಫುಲ್ ಟ್ರೋಲ್

ವಿಜಯೇಂದ್ರಗೆ 10 ನಿಮಿಷ ಅಮಿತ್ ಶಾ ಬೈದಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್

ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಳೆ ಪತ್ತೆ: ಆರೋಪ ತಳ್ಳಿಹಾಕಿದ ಆಡಳಿತ ಅಧಿಕಾರಿ

70 ಲಕ್ಷ ಕಾರು, ಚಿನ್ನ ಕೊಟ್ಟರೂ ಗಂಡನ ಮನೆಯವರ ಕಾಟ ತಪ್ಪಲಿಲ್ಲ: ನವವಿವಾಹಿತೆ ಆತ್ಮಹತ್ಯೆ

ಮುಂದಿನ ಸುದ್ದಿ