Webdunia - Bharat's app for daily news and videos

Install App

ಗರ್ಲ್ ಫ್ರೆಂಡ್‌ನ್ನು ನೋಡಲೆಂದು ನಕಲಿ ಟಿಕೆಟ್ ಬಳಸಿ ದೆಹಲಿ ವಿಮಾನ ನಿಲ್ದಾಣ ಪ್ರವೇಶ

Webdunia
ಗುರುವಾರ, 18 ಆಗಸ್ಟ್ 2016 (17:10 IST)
ತನ್ನ ಗರ್ಲ್ ಫ್ರೆಂಡ್‌ನ್ನು ನೋಡಬೇಕೆಂಬ ತವಕದಲ್ಲಿ ಇಟಾಲಿಯನ್ ಪ್ರಜೆಯೊಬ್ಬ ಆಗಸ್ಟ್ 14 ರ ಸಂಜೆ ನಕಲಿ ಇ-ಟಿಕೆಟ್ ಬಳಸಿ ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಪ್ರವೇಶಿಸಿದ್ದ ಎಂದು ತಿಳಿದು ಬಂದಿದೆ. ಸ್ವಾತಂತ್ರ್ಯೋತ್ಸವದ ಮುನ್ನಾದಿನವಾಗಿದ್ದರಿಂದ ಭಾರಿ ಭದ್ರತೆ ಒದಗಿಸಲಾಗಿದ್ದರೂ ಆತ ನಿಲ್ದಾಣವನ್ನು ಪ್ರವೇಶಿಸಿದ್ದು ಭದ್ರತಾವ್ಯವಸ್ಥೆಯ ಬಗ್ಗೆ ಪ್ರಶ್ನೆಯನ್ನು ಎತ್ತುವಂತೆ ಮಾಡಿದೆ.
ವಿಮಾನ ನಿಲ್ದಾಣಕ್ಕೆ ಭದ್ರತೆ ಒದಗಿಸುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್ ) ಚೆಕ್-ಇನ್ ಪ್ರದೇಶದಲ್ಲಿ ಶಂಕಾಸ್ಪದ ಪ್ರಯಾಣಿಕನನ್ನು ಕಂಡು ತಕ್ಷಣ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಲಾಗಿದೆ. 
 
ತಾನು ಪ್ರಯಾಣಿಕನೆಂದು ಸಾಬೀತು ಪಡಿಸಲು ಆತನ ಬಳಿ ಯಾವುದೇ ಟಿಕೆಟ್ ಇರಲಿಲ್ಲ. 
 
ಆತನ ಗೆಳತಿ ಚೀನಾ ಈಸ್ಟರ್ನ್ ಏರ್‌ಲೈನ್ಸ್ ಮೂಲಕ ಆಗಸ್ಟ್ 15ರ ನಸುಕಿನ ಜಾವ 2.55ಕ್ಕೆ ಪ್ರಯಾಣಿಸಬೇಕಿತ್ತು. ಆಕೆಯನ್ನು ಭೇಟಿಯಾಗಲು ಆತ ನಕಲಿ ಟಿಕೆಟ್ ಬಳಸಿ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದ ಎಂದು ತಿಳಿದು ಬಂದಿದೆ. ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಸದ್ಯ ಪೊಲೀಸರ ವಶದಲ್ಲಿದ್ದಾನೆ.
 
ಆಗಸ್ಟ್ 15 ರಂದು ಮೊಸ್ಕೋಗೆ ತೆರಳಲಿದ್ದ ಏರೋಫ್ಲೊಟ್ ವಿಮಾನದ ಟಿಕೆಟ್ ಬಳಸಿ ಆತ ನಿಲ್ದಾಣವನ್ನು ಪ್ರವೇಶಿಸಿದ್ದ ಎಂಬುದು ಸಿಸಿ ಟಿವಿ ದೃಶ್ಯಾವಳಿಗಳಿಂದ ಸಾಬೀತಾಗಿದೆ. 
 
ಆತ ಅದೇ ವಿಮಾನದಿಂದ ಮಾಸ್ಕೋಗೆ ತೆರಳುವ ಟಿಕೆಟ್ ಹೊಂದಿದ್ದ. ಆದರೆ ಅದು ಆಗಸ್ಟ್ 16ರದಾಗಿತ್ತು. ಫೋಟೋ ಎಡಿಟಿಂಗ್ ಸಾಫ್ಟವೇರ್ ಬಳಸಿ 16ನ್ನು 15 ಎಂದು ಬದಲಾಯಿಸಿದ್ದ ಆತ ಟರ್ಮಿನಲ್ 3 ನ್ನು ಪ್ರವೇಶಿಸಿದ್ದ. ಏರ್‌ಲೈನ್ಸ್ ಆತನ ವಿವರಗಳನ್ನು ದೃಢೀಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments