Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ ಮುಂದುವರಿಸದ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ

ಅನೈತಿಕ ಸಂಬಂಧ ಮುಂದುವರಿಸದ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ
ಗುಂಟೂರು , ಶನಿವಾರ, 23 ಮೇ 2015 (14:51 IST)
ಲೈವ್ ಇನ್ ರಿಲೇಶನ್‌ಶಿಪ್‌ನಲ್ಲಿ ವಾಸವಾಗಿದ್ದ ಮಹಿಳೆ ಸಂಬಂಧವನ್ನು ಮುಂದುವರಿಸಲು ನಿರಾಕರಿಸಿದ್ದರಿಂದ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿದ ದಾರುಣ ಘಟನೆ ವರದಿಯಾಗಿದೆ.  
 
ಮಹಿಳೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡುತ್ತಿರುವಾಗ ನೆರೆ ಮನೆಯ ಮಹಿಳೆ ಮತ್ತೊಬ್ಬ ವ್ಯಕ್ತಿಗೂ ಚಾಕುವಿನಿಂದ ಆರೋಪಿ ತಿವಿದಿದ್ದರಿಂದ ಮೂವರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲಿಸ್ ಮೂಲಗಳು ತಿಳಿಸಿವೆ.
 
ಆರೋಪಿಯನ್ನು ಬಂಧಿಸಿದ ಪೊಲೀಸರು ಆರೋಪಿಯ ವಿರುದ್ಧ ಹತ್ಯಾಯತ್ನ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
 
ಮೂಲಗಳ ಪ್ರಕಾರ, ಮಹಿಳೆ ಮತ್ತು ದಾಳಿ ಮಾಡಿದ ವ್ಯಕ್ತಿ ಮಣಿಕಂಠ ಇಬ್ಬರು ಗುಂಟೂರು ಜಿಲ್ಲೆಯ ನಲ್ಲಾ ಚೆರುವು ಗ್ರಾಮದವರು. ಇಬ್ಬರು ಲೈವ್ ಇನ್ ರಿಲೇಶನ್‌ಶಿಪ್‌ನಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ಮಣಿಕಂಠನಿಗೆ ಮದುವೆಯಾಗಿ ಒಬ್ಬಳಉ ಮಗಳಿದ್ದಾಳೆ ಎನ್ನುವುದು ತಿಳಿದು ಆಘಾತಗೊಂಡ ಮಹಿಳೆ ತನ್ನ ತಂದೆ ತಾಯಿ ಮನೆಗೆ ವಾಪಸಾಗಿದ್ದಳು. 
 
ಆದರೆ, ಸಂಬಂಧವನ್ನು ಮುಂದುವರಿಸುವಂತೆ ಮಣಿಕಂಠ ಮಹಿಳೆಯ ಮೇಲೆ ನಿರಂತರವಾಗಿ ಒತ್ತಡ ಹೇರಲು ಆರಂಭಿಸಿದಾಗ ಇಬ್ಬರ ನಡುವೆ ಹಲವು ಬಾರಿ ಜಗಳಗಳಾಗಿದ್ದವು. 
 
ಕಳೆದ ಗುರುವಾರದಂದು ರಾತ್ರಿ ಮಹಿಳೆಯ ಮನೆಗೆ ನುಗ್ಗಿದ ಮಣಿಕಂಠ ತನ್ನ ಜೊತೆಗೆ ಬರುವಂತೆ ಒತ್ತಾಯಿಸಿದ. ಆದರೆ ಆತನ ಆಹ್ವಾನವನ್ನು ಆಕೆ ತಿರಸ್ಕರಿಸಿದಾಗ ಚಾಕುವಿನಿಂದ ಹಲ್ಲೆ ಮಾಡಿದ ಎನ್ನಲಾಗಿದೆ.
 
ನೆರೆಮನೆಯವರಾದ ಒಬ್ಬ ಮಹಿಳೆ ಮತ್ತು ರಫಿ ಎಂಬಾತ ಜಗಳ ಬಿಡಿಸಲು ಹೋದಾಗ ಆರೋಪಿ ಅವರ ಮೇಲೂ ಹಲ್ಲೆ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

Share this Story:

Follow Webdunia kannada