Select Your Language

Notifications

webdunia
webdunia
webdunia
webdunia

ಸಚಿವರ ಚೇರ್‌ನಲ್ಲಿ ಕುಳಿತು ಸೆಲ್ಫಿ ತೆಗೆದ ಯುವಕ ಅರೆಸ್ಟ್

ಸಚಿವರ ಚೇರ್‌ನಲ್ಲಿ ಕುಳಿತು ಸೆಲ್ಫಿ ತೆಗೆದ ಯುವಕ ಅರೆಸ್ಟ್
ಲಕ್ನೋ , ಗುರುವಾರ, 20 ಜುಲೈ 2017 (16:45 IST)
ಉತ್ತರಪ್ರದೇಶದ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಚೇರ್‌ನಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡಿದ್ದ ಬಾರಾಬಂಕಿ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 
 
ರಾಜ್ಯದ ಸೈಬರ್ ಅಪರಾಧ ವಿಭಾಗ, ಆರೋಪಿ ಅಜಯ್ ತಿವಾರಿಯನ್ನು ಬಂಧಿಸಿದ್ದು, ವಿಚಾರಣೆಗಾಗಿ ಹುಸೈನ್‌ಗಂಜ್ ಪೊಲೀಸ್ ಠಾಣೆಗೆ ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ.
 
ಆರೋಪಿ ಅಜಯ್ ತಿವಾರಿ ತನ್ನ ಗೆಳೆಯನೊಂದಿಗೆ ಸಚಿವರನ್ನು ಭೇಟಿಯಾಗಲು ಬಂದಾಗ ಈ ಘಟನೆ ನಡೆದಿದೆ.ಸಚಿವರ ಕೊಠಡಿಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ತಿವಾರಿ, ಸಚಿವರ ಚೇರ್‌ನಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.
 
ಅದರ ನಂತರ ತಿವಾರಿ ಏನು ಮಾಡಿದರೆ ಅವನಿಗೆ ತೊಂದರೆ ಸಿಕ್ಕಿತು. ಅವರು ಫೇಸ್ಬುಕ್ನಲ್ಲಿ ಆ ಛಾಯಾಚಿತ್ರವನ್ನು ಪೋಸ್ಟ್ ಮಾಡಿದರು, ಅವರು ಎಷ್ಟು ಉತ್ತಮವಾಗಿ ಸಂಪರ್ಕ ಹೊಂದಿದ್ದಾರೆ ಎಂಬ ಬಗ್ಗೆ ಹೆಮ್ಮೆಪಡುತ್ತಾರೆ.
 
ತಾನು ಸಚಿವರೊಂದಿಗೆ ಎಷ್ಟು ಆತ್ಮಿಯನಾಗಿದ್ದೇನೆ ಎಂದು ತೋರಿಸಲು ಯುವಕ, ಸೆಲ್ಫಿಯನ್ನು ಫೇಸ್‌ಬುಕ್‌ನಲ್ಲಿ ಸಂದೇಶದೊಂದಿಗೆ ಪೋಸ್ಟ್ ಮಾಡಿರುವುದೇ ಬಂಧನಕ್ಕೆ ಮೂಲ ಕಾರಣವಾಗಿದೆ.
 
ಹಲವಾರು ಜನರಿಂದ ದೂರುಗಳನ್ನು ಸ್ವೀಕರಿಸಿದಾಗ ಮಂತ್ರಿಯು ಅದರ ಗಾಳಿಯನ್ನು ಪಡೆಯುತ್ತಾನೆ. ಅವರ ಕಾರ್ಯದರ್ಶಿ ಪೊಲೀಸ್ ದೂರು ದಾಖಲಿಸಿದರು.
 
ಸಚಿವರ ಚೇರ್‌ನಲ್ಲಿ ಕುಳಿತು ಸೆಲ್ಫಿ ತೆಗೆದ ಯುವಕನ ಬಗ್ಗೆ ದೂರುಗಳು ಬರಲಾರಂಭಿಸಿದಾಗ, ಸಚಿವರ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿ ಕೃಷ್ಣನ ಜನ್ಮಸ್ಥಳಕ್ಕೆ ಕಳುಹಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆ’