Webdunia - Bharat's app for daily news and videos

Install App

ಚಿಕ್ಕಮ್ಮನನ್ನು ಮದುವೆಯಾಗಲು ಮಗುವನ್ನು ಅಪಹರಿಸಿದ

Webdunia
ಮಂಗಳವಾರ, 20 ಸೆಪ್ಟಂಬರ್ 2016 (14:47 IST)
ಹಣಕ್ಕಾಗಿ ಶ್ರೀಮಂತರ ಮಗುವನ್ನು ಅಪಹರಿಸಿ ಅವರ ತಂದೆ-ತಾಯಿಗಳಿಗೆ ಹಣದ ಬೇಡಿಕೆಯನ್ನು ಮಾಡಿದ ಬಗ್ಗೆ ಕೇಳಿರುತ್ತಿರಾ. ಆದರೆ ಇಲ್ಲೊಬ್ಬ ಯುವಕ ತಾನು ಇಷ್ಟ ಪಟ್ಟ ಯುವತಿಯನ್ನು ಮದುವೆಯಾಗಲು ಆಕೆಯ ಅಕ್ಕನ ಮಗನನ್ನು ಅಪಹರಿಸಿದ್ದಾನೆ. ಬಳಿಕ ನೀನು ನನ್ನನ್ನು ತಿರಸ್ಕರಿಸುವುದನ್ನು ಮುಂದುವರೆಸಿದರೆ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. 

ಪಶ್ಚಿಮ ದೆಹಲಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಮುಂಡ್ಕಾ ಪ್ರದೇಶದಲ್ಲಿ 6 ವರ್ಷದ ಮಗುವನ್ನು ಅಪಹರಿಸಿದ ಆರೋಪಿ ಪಿಂಟೂ ಕುಮಾರ್ ಬಳಿಕ ಶೈಕ್ಪುರಾ ಎಂಬ ಗ್ರಾಮಕ್ಕೆ ಪರಾರಿಯಾಗಿದ್ದ. 
 
ಆರೋಪಿ ಪಿಂಟೂ ಬಿಹಾರದ ಭಾಗಲ್ಪುರ ಜಿಲ್ಲೆಯ ಹಿರನ್ ಕುಡ್ನಾದವನಾಗಿದ್ದು ಗ್ರಾಮದಲ್ಲಿ ನಡೆದ ಮದುವೆಯೊಂದರಲ್ಲಿ ಯುವತಿಯನ್ನು ನೋಡಿದ್ದ. ಪ್ರಥಮ ನೋಟದಲ್ಲೇ ಆಕೆಯನ್ನು ಪ್ರೀತಿಸಿದ ಆತ ಹೇಗಾದರೂ ಮಾಡಿ ಅವಳನ್ನೇ ಮದುವೆಯಾಗಲು ಆಕೆಯ ಬಾವ (ಮಗುವಿನ ತಂದೆ)ನೊಂದಿಗೂ ಸ್ನೇಹ ಸಂಪಾದಿಸಿದ. ಸ್ಪಲ್ಪ ದಿನಗಳ ನಂತರ ಯುವತಿ ತನ್ನ ಅಕ್ಕ-ಬಾವನ ಜತೆ ದೆಹಲಿಗೆ ಹೊರಟು ಹೋದಳು. ಅಲ್ಲು ಕೂಡ ಆಕೆಯನ್ನೇ ಹಿಂಬಾಲಿಸಿದ ಆತ ತಾನು ಕೂಡ ದೆಹಲಿಗೆ ತೆರಳಿ ಆಕೆಯ ಅಕ್ಕನ ಜತೆ ಮದುವೆಯ ಪ್ರಸ್ತಾಪವಿಟ್ಟ. ಆದರೆ ಆತ ನಿರುದ್ಯೋಗಿಯಾಗಿದ್ದರಿಂದ ಮದುವೆಗೆ ಸಮ್ಮತಿ ಸಿಗಲಿಲ್ಲ.
 
ಇದರಿಂದ ಕೋಪಗೊಂಡ ಆತ ಸೆಪ್ಟೆಂಬರ್ 14 ರಂದು ಶಾಲೆಗೆ ಹೋಗಿದ್ದ ಮಗುವನ್ನು ಅಪಹರಿಸಿಕೊಂಡು ಮಗುವನ್ನೆತ್ತಿಕೊಂಡು ಪರಾರಿಯಾದ. ಬಳಿಕ ಸಾರ್ವಜನಿಕ ದೂರವಾಣಿಯಿಂದ ಆತನ ತಾಯಿಗೆ ಫೋನ್ ಕರೆ ಮಾಡಿ ನಿಮ್ಮ ತಂಗಿಯನ್ನು ಮದುವೆ ಮಾಡಿಕೊಡದಿದ್ದರೆ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ.
 
ಯುವತಿಯ ಅಕ್ಕ ತಕ್ಷಣ ಪೊಲೀಸರಿಗೆ ದೂರು ಸಲ್ಲಿಸಿದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಭಾನುವಾರ ಮಗುವನ್ನು ರಕ್ಷಿಸಿದ್ದು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳ ಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಕ್ರೋಶಕ್ಕೆ ಕಾರಣವಾಗಿದ್ದ ಮಲೆ ಮಹದೇಶ್ವರ ವನ್ಯಧಾಮದ ಹುಲಿಗಳ ಸಾವಿಗೆ ಕಾರಣ ಪತ್ತೆ

ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರು ಅರೆಸ್ಟ್‌

ಮಲೈ ಮಹದೇಶ್ವರನ ವಾಹನ ಹುಲಿಯನ್ನೇ ಕೊಂದವರನ್ನು ಬಿಡಬಾರದು: ವಿಜಯೇಂದ್ರ

ಕೆಂಪೇಗೌಡರು ದಕ್ಷ ಆಡಳಿತಗಾರರಾಗಿದ್ದರು: ಸಿದ್ದರಾಮಯ್ಯ

ಆಪರೇಷನ್ ಸಿಂಧು: ಇರಾನ್, ಇಸ್ರೇಲ್‌ನಿಂದ 4,400 ಭಾರತೀಯರು ತಾಯ್ನಾಡಿಗೆ

ಮುಂದಿನ ಸುದ್ದಿ
Show comments