Webdunia - Bharat's app for daily news and videos

Install App

ಪತ್ನಿಯ ಮಾನಸಿಕ ಕಾಯಿಲೆ ನಿವಾರಣೆಗಾಗಿ ನಾಲ್ಕು ನರಬಲಿ

Webdunia
ಶನಿವಾರ, 1 ಆಗಸ್ಟ್ 2015 (17:15 IST)
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿಯ ಕಾಯಿಲೆ ನಿವಾರಣೆಗಾಗಿ ಮಾಂತ್ರಿಕನ ಸಹಾಯ ಕೋರಿದ್ದ ವ್ಯಕ್ತಿಯೊಬ್ಬ ಆ ದುರುಳನ ಸಲಹೆಯ ಮೇರೆಗೆ ನಾಲ್ಕು ಬಾಲಕಿಯರ ನರಬಲಿ ನೀಡಿದ ಕರಾಳ ಘಟನೆ ಆಗ್ರಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
 
ಅವರನ್ನು ಬಲಿ ನೀಡುವ ಮುನ್ನ ಆತ ಅತ್ಯಾಚಾರವನ್ನು ಸಹ ಎಸಗಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಈ ಪೈಶಾಚಿಕ ಕೃತ್ಯ ನಡೆಸಿದ ಆರೋಪಿಯನ್ನು ಸೋನು ಎಂದು ಗುರುತಿಸಲಾಗಿದ್ದು ಆತನೀಗ ಪೊಲೀಸರ ವಶದಲ್ಲಿದ್ದಾನೆ. 
 
ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಸೋನು ಪತ್ನಿ ಕಾಯಿಲೆ ನಿವಾರಣೆಯಾಗಬೇಕಾದರೆ 7 ಜನ ಅಪ್ರಾಪ್ತ ಬಾಲಕಿಯರನ್ನು ಬಲಿ ನೀಡಬೇಕು ಎಂದು ಮಾಂತ್ರಿಕ ಸಲಹೆ ನೀಡಿದ್ದನಂತೆ. 
 
ಮಥುರಾ ಪೊಲೀಸ್  ಠಾಣೆಯಲ್ಲಿ ಬಂಧಿಯಾಗಿದ್ದ ಸೋನು ಗೆಳೆಯ ಲಾಲುವಾ ಬಾಲ್ಮಿಕಿಯನ್ನು ಹೊರಗೆಳೆದು ತಂದ 100 ಜನರ ಗುಂಪೊಂದು 12 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಆರೋಪ ಹೊರಿಸಿ ಮನಬಂದಂತೆ ಥಳಿಸಿದಾಗ ಸೋನು ಮಾಡಿದ ಪಾಪಕಾರ್ಯಗಳು ಬಯಲಾಗಿವೆ. ಉದ್ರಿಕ್ತ ಜನರ ಗುಂಪು ಬಾಲ್ಮಿಕಿ ಮೇಲೆ ದಾಳಿ ನಡೆಸಿದಾಗ ಸೋನು ಸಹ ಆತಮ ಜತೆಯಲ್ಲಿದ್ದು, ಆತನಿಗೆ ಸಹ ಜನರು ಗೂಸಾ ಕೊಟ್ಟಿದ್ದಾರೆ. 
 
ನವೆಂಬರ್ 23, 2020ರಲ್ಲಿ ಗ್ರಾಮದಲ್ಲಿ 14 ವರ್ಷದ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು.  ಆ ಬಳಿಕ 2012ರಲ್ಲಿ ನಾಲ್ಕು ವರ್ಷದ ಮಗುವಿಗೂ ಸಹ ಅದೇ ಗತಿಯಾಗಿತ್ತು. 9 ವರ್ಷದ ಬಾಲಕಿ ಮತ್ತು 12 ವರ್ಷದ ಬಾಲಕಿ ಸೋನುವಿಗೆ ಆಹುತಿಯಾದ ಉಳಿದಿಬ್ಬರು ನತದೃಷ್ಟರಾಗಿದ್ದಾರೆ.
 
ಆದರೆ, ಸೋನು ಅತ್ಯಾಚಾರ ಮತ್ತು ಕೊಲೆಯ ಆರೋಪಗಳನ್ನು ತಳ್ಳಿ ಹಾಕಿದ್ದಾನೆ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ. ಮಾಟಗಾರ ನೀಡಿದ್ದ ಸಲಹೆಯನ್ನು ನಾನು ಬಾಲ್ಮಿಕಿಗೆ ಹೇಳಿದ್ದೆ. ನನಗಾಗಿ ಆತ ಬಾಲಕಿಯರನ್ನು ಕೊಂದ ಎಂದು ಸೋನು ಹೇಳಿದ್ದಾನೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments