ಹಲವು ಭಾಗಗಳಲ್ಲಿ ಹಿಂಸಾಚಾರ ಘಟನೆಗಳು , ಕೇಂದ್ರ ಸರಕಾರದೊಂದಿಗಿನ ತಿಕ್ಕಾಟದ ಮಧ್ಯೆಯೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದಿಗೆ ತಮ್ಮ ನಾಲ್ಕು ವರ್ಷಗಳ ಅಧಿಕಾರವಧಿಯನ್ನು ಪೂರೈಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್ಬುಕ್ನಲ್ಲಿ ರಾಜ್ಯದ ಜನತೆಗೆ ಅಬಿನಂಧನೆ ಸಲ್ಲಿಸಿ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹಿಂದಿನ ಸರಕಾರ ಬಿಟ್ಟು ಹೋದ ಭಾರಿ ಸಾಲದ ಹೊರೆ, ರಾಜಕೀಯ ಅಡ್ಡಿಗಳು ಹಣಕಾಸಿನ ತೊಂದರೆಗಳ ಮಧ್ಯೆಯೂ ಉತ್ತಮ ಅಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ನನ್ನ ಪಶ್ಚಿಮ ಬಂಗಾಳ ಕುಟುಂಬದ ತಾಯಿಯವರಿಗೆ, ಸಹೋದರ, ಸಹೋದರಿಯರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಕಲೆ, ಸಾಹಿತ್ಯ ಸಂಸ್ಕ್ರತಿ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ವ್ಯಕ್ತಿಗಳಿಗಾಗಿ ಕಳೆದ 2011ರಲ್ಲಿ ಆರಂಭಿಸಲಾದ ಬಂಗಾ ಭೂಷಣ್ ಮತ್ತು ಬಂಗಾ ಬಿಭೂಷಣ್ ಪ್ರಶಸ್ತಿಗಳನ್ನು ಅರ್ಹ ವ್ಯಕ್ತಿಗಳಿಗೆ ನೀಡಿ ಮುಖ್ಯಮಂತ್ರಿ ಬ್ಯಾನರ್ಜಿ ಗೌರವಿಸಿದ್ದಾರೆ.