Webdunia - Bharat's app for daily news and videos

Install App

ನಾನು ಮಾತನಾಡಲು ಕೈ ಎತ್ತಿದಾಗ ಸ್ಪೀಕರ್ ಅವಕಾಶ ಕೊಡಬೇಕಿತ್ತು: ಜಗದೀಪ್ ಧನ್ಕರ್ ವಿರುದ್ಧ ಮಲ್ಲಿಕಾರ್ಜು ಖರ್ಗೆ ಆಕ್ರೋಶ

Krishnaveni K
ಶುಕ್ರವಾರ, 28 ಜೂನ್ 2024 (17:38 IST)
ನವದೆಹಲಿ: ನೀಟ್ ಅಕ್ರಮದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸ್ಪೀಕರ್ ಜಗದೀಪ್ ಧನ್ಕರ್ ನಡುವೆ ಇಂದು ಕಿತ್ತಾಟವೇ ನಡೆದಿದೆ.

ನೀಟ್ ಅಕ್ರಮದ ಕುರಿತಾಗಿ ಪ್ರತಿಭಟಿಸಲು ಮಲ್ಲಿಕಾರ್ಜುನ ಖರ್ಗೆ ನೇರವಾಗಿ ಸದನದ ಬಾವಿಗಿಳಿದು ಸ್ಪೀಕರ್ ಗಮನ ಸೆಳೆಯಲು ಯತ್ನಿಸಿದರು. ಈ ವೇಳೆ ಸಿಟ್ಟಿಗೆದ್ದ ಸ್ಪೀಕರ್ ಜಗದೀಪ್ ಧನ್ಕರ್ ಇಂತಹ ಘಟನೆ ಹಿಂದೆಂದೂ ಆಗಿರಲಿಲ್ಲ. ಭಾರತದ ಇತಿಹಾಸಲದಲ್ಲೇ ವಿರೋಧ ಪಕ್ಷದ ನಾಯಕರು ಬಾವಿಗಿಳಿದು ಪ್ರತಿಭಟಿಸಿದ್ದು ಇದೇ ಮೊದಲ ಬಾರಿ ಆಗಿತ್ತು. ಇದು ಶಾಕಿಂಗ್ ಮತ್ತು ಈ ಘಟನೆಯಿಂದ ತನಗೆ ತೀರಾ ನೋವಾಗಿರುವುದಾಗಿ ಧನ್ಕರ್ ಸಿಟ್ಟಿನಿಂದಲೇ ಹೇಳಿದರು. ಗದ್ದಲವೆದ್ದಿದ್ದರಿಂದ ಸದನವನ್ನು ಮುಂದೂಡಿದರು.

ಬಳಿಕ ಮಾಧ್ಯಮಗಳ ಮುಂದೆ ಈ ಬಗ್ಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ’ಇದು ಸಭಾಪತಿಗಳ ತಪ್ಪು. 10 ನಿಮಿಷದಿಂದ ಮಾತನಾಡಲು ಅವಕಾಶ ನೀಡುವಂತೆ ಕೈ ಎತ್ತಿ ಹಿಡಿದಿದ್ದರೂ ಅವಕಾಶ ಕೊಡಲಿಲ್ಲ. ಹೀಗಾಗಿ ನಾನು ಆ ರೀತಿ ಮಾಡಬೇಕಾಯಿತು. ನನ್ನನ್ನು ಹಿಂಬಾಲಿಸಿ ಬೇರೆ ನಾಯಕರು ಬಂದಾಗ ನಾನು ಅಲ್ಲಿಂದ ಜಾಗ ಖಾಲಿ ಮಾಡಿದ್ದೆ. ನಾನು ಕೈ ಎತ್ತಿ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದಾಗ ಅವರು ನನ್ನ ಬಳಿ ನೋಡಬೇಕಿತ್ತು. ಇದು ನನಗೆ ಅವರು ಮಾಡಿದ ಅವಮಾನ’ ಎಂದು ತಿರುಗೇಟು ನೀಡಿದ್ದಾರೆ.

ನೀಟ್ ವಿಚಾರವಾಗಿ ದೊಡ್ಡ ಅಕ್ರಮವೇ ನಡೆದಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ನಾವು ವಿದ್ಯಾರ್ಥಿಗಳ ಪರವಾಗಿ ಚರ್ಚೆ ಮಾಡೋಣ ಎಂದಿದ್ದೆವು ಅಷ್ಟೇ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ಮುಂದಿನ ಸುದ್ದಿ
Show comments