Select Your Language

Notifications

webdunia
webdunia
webdunia
webdunia

ಗೃಹ ಸಚಿವ ಜಾರ್ಜ್‌ಗೆ ಜೀವಬೆದರಿಕೆ ಕರೆ ಮಾಡಿದ್ದ ಆರೋಪಿ ಬಂಧನ

ಗೃಹ ಸಚಿವ ಜಾರ್ಜ್‌ಗೆ ಜೀವಬೆದರಿಕೆ ಕರೆ ಮಾಡಿದ್ದ ಆರೋಪಿ ಬಂಧನ
ಬೆಂಗಳೂರು , ಮಂಗಳವಾರ, 15 ಜುಲೈ 2014 (16:01 IST)
ಗೃಹ ಸಚಿವ ಕೆ.ಜೆ. ಜಾರ್ಜ್ ಅವರನ್ನು ಹತ್ಯೆ ಮಾಡುತ್ತೇನೆ ಎಂದು ಸ್ಥಳೀಯ ಚಾನೆಲ್‌ಗೆ ಸಂದರ್ಶನ ನೀಡಿದ 35 ವರ್ಷ ವಯಸ್ಸಿವ ವ್ಯಕ್ತಿಯನ್ನು ಕೇಂದ್ರ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. 
 
ಬಂಧಿತ ವ್ಯಕ್ತಿ ಶ್ರೀಹನ್ಸ್ ಪಾಟೀಲ್ ಮಹಾರಾಷ್ಟ್ರದ ಕುಂದರವಾಡ್ ಗ್ರಾಮದ ನಿವಾಸಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ನನ್ನ ಹೆಸರು ಶಿವಾಜಿ ಗಾವಡೆ. ನಾನು ಮಹಾರಾಷ್ಟ್ರದ ರೌಡಿ. ಕರ್ನಾಟಕದ ಗೃಹ ಸಚಿವರನ್ನು ಹತ್ಯೆ ಮಾಡುತ್ತೇನೆ ಎಂದು ಆರೋಪಿ ಪಾಟೀಲ್ ಸ್ಥಳೀಯ ಚಾನೆಲ್‌ಗೆ ಹೇಳಿಕೆ ನೀಡಿದ್ದನು.
 
ಟೆಲಿವಿಜನ್ ಚಾನೆಲ್‌ನವರು ಕೂಡಲೇ ಬೆಂಗಳೂರಿನ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದಾಗ, ಕರ್ನಾಟಕ ಪೊಲೀಸರು, ಮಹಾರಾಷ್ಟ್ರ ಪೊಲೀಸರ ನೆರವು ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 

Share this Story:

Follow Webdunia kannada