Select Your Language

Notifications

webdunia
webdunia
webdunia
webdunia

ನೇಣು ಬಿಗಿದುಕೊಂಡು ನ್ಯಾಯಾಧೀಶ ಆತ್ಮಹತ್ಯೆ

ನೇಣು ಬಿಗಿದುಕೊಂಡು ನ್ಯಾಯಾಧೀಶ ಆತ್ಮಹತ್ಯೆ
ಮಂಗಳೂರು , ಬುಧವಾರ, 9 ನವೆಂಬರ್ 2016 (16:43 IST)
ಮದ್ಯ ಸೇವಿಸಿ ಆಟೋ ಚಾಲಕ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪವನ್ನೆದುರಿಸುತ್ತಿದ್ದ ಕೇರಳದ ಕಾಸರಗೋಡು ಜ್ಯುಡಿಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ವಿ.ಕೆ. ಉಣ್ಣಿಕೃಷ್ಣನ್ (45) ಬುಧವಾರ ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
 
ಕೇರಳದ ತ್ರಿಶ್ಯೂರ್ ನಿವಾಸಿಯಾಗಿದ್ದ ಕೃಷ್ಣನ್ ಇಂದು ಬೆಳಿಗ್ಗೆ 10 ರ ಸುಮಾರಿಗೆ ಕಾಸರಗೋಡು ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಬಳಿ ಇರುವ ನ್ಯಾಯಾಧೀಶರ ವಸತಿಗೃಹದಲ್ಲಿ ಸಾವಿಗೆ ಶರಣಾಗಿದ್ದಾರೆ. ಹೊರಗೆ ಹೋಗಿದ್ದ ಮನೆಗೆಲಸದ ಸಿಬ್ಬಂದಿ ಮರಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
 
ಕಳೆದ ಭಾನುವಾರ ಸುಳ್ಯದಲ್ಲಿ ಆಟೋಚಾಲಕ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಂಗಳವಾರ ಸಂಜೆಯಷ್ಟೇ ಮನೆಗೆ ಮರಳಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ವೈಟ್ ಮನಿ ಇದ್ದವರಿಗೆ ತೊಂದರೆಯಿಲ್ಲ : ಸಿಎಂ ಸಿದ್ದರಾಮಯ್ಯ