Select Your Language

Notifications

webdunia
webdunia
webdunia
webdunia

ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಸಹೋದ್ಯೋಗಿಯನ್ನು ಕೊಲೆಗೈದ ಎಂಜಿನಿಯರ್‌

ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಸಹೋದ್ಯೋಗಿಯನ್ನು ಕೊಲೆಗೈದ ಎಂಜಿನಿಯರ್‌
ಚೆನ್ನೈ , ಬುಧವಾರ, 23 ಏಪ್ರಿಲ್ 2014 (08:51 IST)
ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಅಸಮಾಧಾನಗೊಂಡ 29 ವರ್ಷದ ಸಾಫ್ಟವೇರ್  ಎಂಜಿನಿಯರ್‌ನೊಬ್ಬ ತನ್ನ ಸಹೋದ್ಯೋಗಿಯನ್ನು ಚಾಕುವಿನಿಂದ ಇರಿದು ಸಾಯಿಸಿ ತಾನು ಸಹ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಚೆನ್ನೈನಲ್ಲಿ ವರದಿಯಾಗಿದೆ. 
ಈಗ ಆತ ಸಾವು ಮತ್ತು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. 25 ವರ್ಷದ ವೈಶ್ಯ ಎಂಬುವಳ ಜತೆ ನಡೆದ ತುಸು ಸಮಯದ ಚರ್ಚೆಯ ನಂತರ 29 ವರ್ಷದ ವೆಂಕಟಚಲಪತಿ ಆಕೆಗೆ ಚಾಕುವಿನಿಂದ ಇರಿದ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಕೆಲಸ ಮುಗಿಸಿ ತಡರಾತ್ರಿ ಆಕೆ ಪೆರುಂಗುಡಿ ರೇಲ್ವೇ ನಿಲ್ದಾಣದ ಕಡೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಆಕೆಯ ಮೇಲೆ ಹಲ್ಲೆ ನಡೆಸಿದ ನಂತರ ಆತ ತನ್ನನ್ನು ತಾನು ಇರಿದುಕೊಂಡಿದ್ದಾನೆ. 
 
ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆ ಯುವತಿ ಮತ್ತು ಯುವಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಆದರೆ ಆಕೆ ಅಲ್ಲಿ ಕೊನೆಯುಸಿರೆಳೆದಳು ಮತ್ತು ಆಪಾದಿತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  
 

Share this Story:

Follow Webdunia kannada