16ನೇ ಲೋಕಸಭೆ ಚುನಾವಣೆಯ ಕೊನೆಯ ಸುತ್ತಿನ ಚುನಾವಣೆ ಮೇ 12 ರಂದು
ನಡೆಯಲಿದ್ದ ಕಾರಣ ಇಂದಿನಿಂದ ಬಹಿರಂಗ ಪ್ರಚಾರಕ್ಕೆ ಕೊನೆಯಾಗಲಿದೆ. ಇಂದಿನಿಂದ ಯಾವುದೇ
ರೀತಿಯ ಬಹಿರಂಗ ಪ್ರಚಾರ ,ರ್ಯಾಲಿ , ಸಮಾರಂಭಗಳು ನಡೆಯುವುದಿಲ್ಲ.
ನಾಳೆ ಬಿಹಾರ , ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಒಟ್ಟು 41 ಕ್ಷೇತ್ರಗಳಲ್ಲಿ ಕೊನೆಯ ಹಂತದ
ಮತದಾನ ನಡೆಯಲಿದೆ. ಬಿಜೆಪಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪರ್ದಿಸುತ್ತಿರುವ
ವಾರಣಾಸಿಯಲ್ಲೂ ಕೂಡ ನಾಳೆ ಮತದಾನ ನಡೆಯಲಿದೆ.
ವಾರಣಾಸಿಯಲ್ಲಿ ನರೇಂದ್ರ ಮೋದಿ ಮತ್ತು ಅರವಿಂದ ಕೇಜ್ರಿವಾಲ ನಡುವೆ ಹಣಾಹಣಿ ನಡೆಯಲಿದೆ.
ಮತದಾರ ಯಾರಿಗೆ ಒಲಿಯುತ್ತಾನೆ ಎಂದು ಮೇ 16 ರಂದು ಗೊತ್ತಾಗಲಿದೆ. ಆದರೆ ನಾಳೆಯ
ವಾರಣಾಸಿಯಲ್ಲಿನ ಚುನಾವಣೆ ದೇಶದ ಗಮನ ಸೆಳೆದಿದೆ.