Select Your Language

Notifications

webdunia
webdunia
webdunia
webdunia

ಪ್ರತಿ ಮಂತ್ರಿಗಳ ಮನೆಯಲ್ಲಿ ಐದೈದು ನಾಯಿ ಬಿಡುತ್ತಾರಂತೆ ಇವರು!

ಪ್ರತಿ ಮಂತ್ರಿಗಳ ಮನೆಯಲ್ಲಿ ಐದೈದು ನಾಯಿ ಬಿಡುತ್ತಾರಂತೆ ಇವರು!
ಶ್ರೀನಗರ್ , ಸೋಮವಾರ, 30 ಮಾರ್ಚ್ 2015 (11:11 IST)
ರಾಜ್ಯದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಸಮಸ್ಯೆ ಕುರಿತಂತೆ ಸರಕಾರ ತೋರುತ್ತಿರುವ ನಿರ್ಲಕ್ಷಕ್ಕೆ ಕೆಂಡಾಮಂಡಲರಾಗಿರುವ  ಪಕ್ಷೇತರ ಶಾಸಕರೊಬ್ಬರು  ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪ್ರತಿಯೊಬ್ಬ ಸಚಿವರ ಮನೆಗೆ ಐದೈದು ನಾಯಿಗಳನ್ನು ಬಿಡುತ್ತೇನೆ ಎಂದು ಎಚ್ಚರಿಸಿದ್ದಾರೆ.   

ವಿಧಾನಸಭಾ ಕಲಾಪದ ವೇಳೆ ಮಾತನಾಡುತ್ತಿದ್ದ ಲಾನಗೇಟ್ ಕ್ಷೇತ್ರದ ಶಾಸಕರಾಗಿರುವ ಇಂಜಿನಿಯರ್ ರಶೀದ್, "ನಮ್ಮ ಪ್ರದೇಶಗಳ ರಸ್ತೆಗಳಲ್ಲಿ ನಾಯಿಗಳದೆ ದರ್ಬಾರು. ಜನರು ಹೊರಗಡೆ ತಿರುಗಾಡಲು ಹೆದರುತ್ತಿದ್ದಾರೆ. ಈ ನಾಯಿಗಳ ಸಮಸ್ಯೆಯಿಂದ ಮುಕ್ತಿ ದೊರಕಿಸಲು ನಿಮಗೆ ನಾನು 4 ತಿಂಗಳ ಸಮಯಾವಕಾಶವನ್ನು ಕೊಡುತ್ತೇನೆ. ಸರಕಾರ ಇದರಲ್ಲಿ ವಿಫಲವಾದರೆ ಪ್ರತಿಯೊಬ್ಬ ಶಾಸಕರ ಮನೆಗೆ  ನಾನು ಐದೈದು ನಾಯಿಗಳನ್ನು ಬಿಡುತ್ತೇನೆ",  ಎಂದರು. 
 
ಲಾನಗೇಟ್ ಕ್ಷೇತ್ರದಲ್ಲಿ ಬೀದಿನಾಯಿಗಳ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಪ್ರತಿದಿನ ನಾಯಿ ದಾಳಿ ಪ್ರಕರಣಗಳು ವರದಿಯಾಗುತ್ತಿವೆ. 

Share this Story:

Follow Webdunia kannada