ಮಣಿಪುರದ ಚಾಂಡೇಲ್ ಜಿಲ್ಲೆಯ ಕುಗ್ರಾಮ ಜೌಪಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಇಡೀ ಗ್ರಾಮವೇ ನಾಮಾವಶೇಷವಾಗಿದೆ. ಮಯನ್ಮಾರ್ ಗಡಿಯಲ್ಲಿರುವ ಈ ಗ್ರಾಮದಲ್ಲಿ ಮನೆಗಳು ಭಾರೀ ಭೂಕುಸಿತದಿಂದ ಮಣ್ಣಿನಡಿಯಲ್ಲಿ ಹೂತುಹೋಗಿದ್ದು ಗ್ರಾಮದಲ್ಲಿ ಗುಡ್ಡೆಬಿದ್ದಿರುವ ಭಾರೀ ಮಣ್ಣಿನ ರಾಶಿಯನ್ನು ತೆರವು ಮಾಡುವುದು ನೆರೆಯ ಗ್ರಾಮಸ್ಥರಿಗೆ ಹರಸಾಹಸವಾಗಿ ಪರಿಣಮಿಸಿದೆ.
ತೆರವು ಕಾರ್ಯ ಮುಗಿದ ಬಳಿಕ ಸತ್ತವರ ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ. ಇದುವರೆಗೆ 20 ಗ್ರಾಮಸ್ಥರು ಸತ್ತಿದ್ದು, ಒಬ್ಬ ಮಾತ್ರ ಬದುಕುಳಿದಿದ್ದಾನೆ
. ಕಳೆದ ಕೆಲವು ದಿನಗಳಿಂದ ಬಿದ್ದ ಮಳೆಯಿಂದ ಮಣಿಪುರದಲ್ಲಿ ಕೆಳಪ್ರದೇಶಗಳಲ್ಲಿ ವ್ಯಾಪಕ ಪ್ರವಾಹ ಉಂಟಾಗಿದ್ದು, ಕೃಷಿ ಭೂಮಿಗಳನ್ನು ಮತ್ತು ಮನೆಗಳನ್ನು ನಾಶ ಮಾಡಿವೆ.