Webdunia - Bharat's app for daily news and videos

Install App

ಬಾದಲ್ ಸರ್ಕಾರದ ವಿರುದ್ಧ ಹಾಡು ಕಟ್ಟಿದ ಕುಮಾರ್ ವಿಶ್ವಾಸ್

Webdunia
ಗುರುವಾರ, 12 ಮೇ 2016 (12:05 IST)
ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅವರ ಹೊಸ ಗೀತೆಯೊಂದು  ಯುಟ್ಯೂಬ್‌ನಲ್ಲಿ ಈ ವಾರ ಬಿಡುಗಡೆಯಾಗಿದೆ. ಪಂಜಾಬ್‌ನಲ್ಲಿ ಮುಂದಿನ ವರ್ಷ ಚುನಾವಣೆ ಇರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಅಕಾಲಿ ದಳವನ್ನು ಪಕ್ಷವು ಹೇಗೆ ಗುರಿಯಾಗಿಸಿದೆ ಎನ್ನುವುದಕ್ಕೆ ಇದು ಸಂಕೇತವಾಗಿದೆ.
 
ವಿಶ್ವಾಸ್ ಈ ಗೀತೆಯನ್ನು ಬರೆದು, ಸಂಕಲನ ಮಾಡಿ ಸ್ವತಃ ಹಾಡಿದ್ದಾರೆ. ಪಂಜಾಬ್ ಅನ್ನು ಕಾಡುವ ಮಾದಕವಸ್ತು ಸಮಸ್ಯೆಯ ಬಗ್ಗೆ ಇದರಲ್ಲಿ ಗಮನಸೆಳೆಯಲಾಗಿದ್ದು,  ರಾಜ್ಯವನ್ನು ಆಳುವ ಬಾದಲ್‌ಗಳನ್ನು ಗುರಿಯಾಗಿಸಲಾಗಿದೆ.  ಮೇ 8ರಂದು ಬಿಡುಗಡೆಯಾದ ಗೀತೆ ವೈರಲ್ ಆಗಿದ್ದು, 32,000 ವೀಕ್ಷಕರು ವೀಕ್ಷಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇದಕ್ಕೆ ಮಸ್ಟ್ ವಾಚ್ ರೇಟಿಂಗ್ ನೀಡಿದ್ದು, ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
 
ಬಾದಲ್‌ಗಳು ನಮ್ಮ ರಸ್ತೆಗಳನ್ನು, ಕಾಲುವೆಗಳನ್ನು ಹಾಳುಮಾಡಿದರು, ನದಿಗಳಿಂದ ಎಲ್ಲ ಮರಳನ್ನು ಬಗೆದುತೆಗೆದರು ಎಂದು ಕುಮಾರ್ ವಿಶ್ವಾಸ್ ಪಂಜಾಬಿಯಲ್ಲಿ ಹಾಡುತ್ತಾರೆ. ಓ, ಜಾಟರೇ, ಮಾದಕವಸ್ತುಗಳನ್ನು ತ್ಯಜಿಸಿ, ನಿಮ್ಮ ಪುಟ್ಟ ಪುತ್ರಿ ನಿಮಗೆ ಮನವಿ ಮಾಡುತ್ತದೆ ಎಂದು ವಿಶ್ವಾಸ್ ಹಾಡುತ್ತಾರೆ.
 
 ದೆಹಲಿಯಲ್ಲಿ ಭರ್ಜರಿ ಗೆಲುವು ಗಳಿಸಿದ ಕೇಜ್ರಿವಾಲ್ ಎಎಪಿ ಪಕ್ಷವು ಪಂಜಾಬ್ ಮೇಲೆ ಕಣ್ಣಿರಿಸಿದೆ. ಪಂಜಾಬ್‌ನಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ನಾಲ್ಕು ಸೀಟುಗಳನ್ನು ದಕ್ಕಿಸಿಕೊಟ್ಟಿತ್ತು. ಮಾದಕವಸ್ತು ಪಿಡುಗು ಚುನಾವಣೆಯ ದೊಡ್ಡ ವಿಷಯವಾಗಿದ್ದು, ಬಾದಲ್ ಸರ್ಕಾರಕ್ಕೆ ಎಎಪಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments