Webdunia - Bharat's app for daily news and videos

Install App

ಕೋಲ್ಕತ್ತಾ ವೈದ್ಯೆ ಡೈರಿಯಲ್ಲಿ ಕೊನೆಯದಾಗಿ ಹೀಗೆ ಬರೆದಿದ್ದಳು

Krishnaveni K
ಗುರುವಾರ, 15 ಆಗಸ್ಟ್ 2024 (13:59 IST)
ಕೋಲ್ಕೊತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ರೇಪ್ ಮತ್ತು ಹತ್ಯೆಗೊಳಗಾದ ಟ್ರೈನೀ ವೈದ್ಯೆ ತನ್ನ ಡೈರಿಯಲ್ಲಿ ಕೊನೆಯದಾಗಿ ಬರೆದಿದ್ದ ಸಾಲುಗಳು ಎಂತಹವರ ಕಣ್ಣಲ್ಲೂ ನೀರು ಬರುವಂತಿದೆ.

ಕೋಲ್ಕೊತ್ತಾ ವೈದ್ಯೆಯ ಪೋಷಕರು ತಮ್ಮ ಮಗಳ ಬಗ್ಗೆ ಮಾಧ್ಯಮಗಳ ಮುಂದೆ ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಆಕೆ ಓದಿನಲ್ಲಿ ತುಂಬಾ ಚುರುಕಿದ್ದಳು. ಪ್ರತಿನಿತ್ಯ 10-12 ಗಂಟೆ ಓದುತ್ತಿದ್ದಳು. ಹೀಗಾಗಿ ಆಕೆ ತನ್ನ ಕನಸಿನ ಕೋರ್ಸ್ ನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಯಿತು ಎಂದಿದ್ದಾರೆ.

ಅಷ್ಟೇ ಅಲ್ಲ, ಆಕೆಗೆ ಡೈರಿ ಬರೆಯುವ ಹವ್ಯಾಸವಿತ್ತು. ಕೊನೆಯದಾಗಿ ಆಕೆ ಡೈರಿಯಲ್ಲಿ ‘ನಾನು ಚೆನ್ನಾಗಿ ಓದಿ ಎಂಡಿ ಕೋರ್ಸ್ ನಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾಗಬೇಕು’ ಎಂದು ಬರೆದಿದ್ದಳು ಎಂದು ಹೇಳುತ್ತಾ ಪೋಷಕರು ಕಣ್ಣೀರು ಹಾಕುತ್ತಾರೆ. ಇದು ಆಕೆಗೆ ಓದಿನಲ್ಲಿದ್ದ ಆಸಕ್ತಿ ಮತ್ತು ಜೀವನದ ಗುರಿ ಏನಾಗಿತ್ತು ಎಂಬುದನ್ನು ತೋರಿಸುತ್ತದೆ.

ಇದೀಗ ಮಗಳನ್ನು ಕಳೆದುಕೊಂಡ ನಮ್ಮ ಜೀವನ ಛಿದ್ರವಾಗಿದೆ. ಆಕೆಯ ಓದಿಗಾಗಿ ಇಡೀ ಕುಟುಂಬವೇ ಸಾಕಷ್ಟು ತ್ಯಾಗ ಮಾಡಿದೆ. ಈಗ ಆಕೆಯ ಸಾವಿಗೆ ನ್ಯಾಯ ಸಿಗಬೇಕು ಎಂಬುದಷ್ಟೇ ನಮ್ಮ ಆಗ್ರಹ ಎಂದು ವೈದ್ಯೆಯ ತಂದೆ ಕಣ್ಣೀರು ಹಾಕುತ್ತಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru stampede: ನಂಗೆ ಮಗ ಬೇಕು.. ಮಗನ ಸಮಾಧಿ ಮೇಲೆ ಬಿದ್ದು ಗೋಳಾಡಿದ ಭೂಮಿಕ್ ತಂದೆ

Chinnaswamy stampede: ಕಮಿಷನರ್ ಬಿ ದಯಾನಂದ ಪರವಾಗಿ ಪ್ರತಿಭಟಿಸಿದ ಕಾನ್ಸ್ ಟೇಬಲ್ ಕೊನೆಗೆ ಆಗಿದ್ದೇನು

Namma Metro: ತಾಯಂದಿರೇ ಗಮನಿಸಿ, ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇನ್ನು ಈ ಸೌಲಭ್ಯವಿರಲಿದೆ

Karnataka Rains: ಈ ದಿನದಿಂದ ರಾಜ್ಯದಲ್ಲಿ ಭಾರೀ ಮಳೆ, ಮುಂಗಾರು ಅಬ್ಬರ ಶುರು

Chinnaswamy stampede: ಸಿಎಂ ಕಚೇರಿಯಿಂದಲೇ ಪೊಲೀಸರಿಗೆ ಒತ್ತಡ ಬಂದಿತ್ತು, ಶಾಕಿಂಗ್ ಸತ್ಯ ರಿವೀಲ್

ಮುಂದಿನ ಸುದ್ದಿ
Show comments