Webdunia - Bharat's app for daily news and videos

Install App

ಆಕೆ ದೊಡ್ಡವರ ಟಾರ್ಗೆಟ್ ಆಗಿದ್ದಳು, ಯಾಕೆಂದರೆ..: ಕೋಲ್ಕತ್ತಾ ಟ್ರೈನಿ ವೈದ್ಯೆಯ ಬಗ್ಗೆ ಹೊರಬಿತ್ತು ಭಯಾನಕ ಸತ್ಯ

Krishnaveni K
ಸೋಮವಾರ, 19 ಆಗಸ್ಟ್ 2024 (14:31 IST)
ಕೋಲ್ಕತ್ತಾ: ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ರೇಪ್ ಆಂಡ್ ಮರ್ಡರ್ ಆದ ಟ್ರೈನಿ ವೈದ್ಯೆ ಬಗ್ಗೆ ಆಕೆಯ ಸಹೋದ್ಯೋಗಿಗಳು ಕೆಲವೊಂದು ವಿಚಾರಗಳನ್ನು ಹೊರಹಾಕಿದ್ದು, ಇದು ಈ ಪ್ರಕರಣದ ಹಿಂದೆ ದೊಡ್ಡವರ ಕೈವಾಡವಿರುವ ಬಗ್ಗೆ ಮತ್ತಷ್ಟು ಸಂಶಯ ಹುಟ್ಟುಹಾಕಿದೆ.

31 ವರ್ಷದ ವೈದ್ಯೆಯ ಮೃತದೇಹ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಪತ್ತೆಯಾಗಿತ್ತು. ಆಕೆಯ ಖಾಸಗಿ ಅಂಗಾಂಗಳಿಂದ ರಕ್ತ ಸೋರುತ್ತಿತ್ತು. ಈ ರೇಪ್ ಆಂಡ್ ಮರ್ಡರ್ ಕೇಸ್ ಈಗ ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ಈಗ ಸಂಜಯ್ ರಾಯ್ ಎಂಬ ಆರೋಪಿಯನ್ನು ಬಂಧಿಸಿ ಸಿಬಿಐ ತಂಡ ತನಿಖೆ ನಡೆಸುತ್ತಿದೆ.

ಆದರೆ ಸಂಜಯ್ ರಾಯ್ ಹಿಂದೆ ಬೇರೆಯವರ ಕೈವಾಡವಿದೆ ಎನ್ನುವುದು ಸಹೋದ್ಯೋಗಿಗಳ ಆರೋಪವಾಗಿದೆ. ಯಾಕೆಂದರೆ ಸಂತ್ರಸ್ತೆ ಆ ಸಮಯದಲ್ಲಿ ಸೆಮಿನಾರ್ ಹಾಲ್ ನಲ್ಲೇ ಇದ್ದಳು ಎಂಬ ವಿಚಾರ ಆರೋಪಿಗೆ ಹೇಗೆ ಗೊತ್ತಾಯ್ತು. ಆಸ್ಪತ್ರೆಯ ಹೊರಗೆ ಕರ್ತವ್ಯ ಮಾಡುವವನಿಗೆ ಆಸ್ಪತ್ರೆಯ ಒಳಗೆ ಆಕೆ ಒಬ್ಬಳೇ ಇದ್ದ ವಿಚಾರ ಯಾರೋ ತಿಳಿಸಿರಬೇಕು ಎಂಬುದು ಸಹೋದ್ಯೋಗಿಗಳ ಅನುಮಾನ.

ಇನ್ನು, ಆಕೆಯನ್ನು ಸತತ 36 ಗಂಟೆಗಳ ಕಾಲ ಕರ್ತವ್ಯದಲ್ಲಿರುವಂತೆ ಮಾಡಿದ್ದು ಯಾಕೆ? ಈ ರೀತಿ ವಿಶ್ರಾಂತಿಯಿಲ್ಲದೇ ದುಡಿಸಿಕೊಂಡಿರುವುದರ ಹಿಂದೆ ಬೇರೆ ಏನೋ ಕಾರಣವಿರಲೇಬೇಕು ಎಂಬುದು ಅವರ ವಾದ. ಆಕೆಯನ್ನು ಯಾರೋ ದೊಡ್ಡ ಕೈಗಳು ಬೇಕೆಂದೇ ಟಾರ್ಗೆಟ್ ಮಾಡಿವೆ ಎನ್ನುವುದು ಸಹೋದ್ಯೋಗಿಗಳ ಆರೋಪ. ಯಾಕೆಂದರೆ ಆಕೆಗೆ ಡಿಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ಯಾವುದೋ ಅವ್ಯವಹಾರದ ಬಗ್ಗೆ ನಮ್ಮೆಲ್ಲರಿಗಿಂತ ಹೆಚ್ಚು ಅರಿವಿತ್ತು. ಅದೇ ಕಾರಣಕ್ಕೆ ಯಾವುದೋ ದೊಡ್ಡ ಕೈಯೇ ಆಕೆಯ ವಿರುದ್ಧ ಸಂಚು ರೂಪಿಸಿದೆ ಎಂಬುದು ಸಹೋದ್ಯೋಗಿಗಳ ಆರೋಪ.

ಇನ್ನು ಸಂತ್ರಸ್ತೆಯ ಪೋಷಕರೂ ಇತ್ತೀಚೆಗೆ ತಮ್ಮ ಮಗಳಿಗೆ ಆರ್ ಜಿ ಕರ್ ಆಸ್ಪತ್ರೆಗೆ ಹೋಗುವುದೇ ಇಷ್ಟವಿರಲಿಲ್ಲ ಎಂದಿದ್ದಾರೆ. ಆಕೆ ಆಸ್ಪತ್ರೆಗೆ ಹೋಗುವುದೆಂದರೇ ಬೇಸರ ವ್ಯಕ್ತಪಡಿಸುತ್ತಿದ್ದಳು. ಸಾವಿನ ಕೆಲವು ದಿನ ಮೊದಲು ನನಗೆ ಆರ್ ಜಿ ಕರ್ ಆಸ್ಪತ್ರೆಗೆ ಹೋಗಬೇಕೆಂದೇ ಅನಿಸುವುದಿಲ್ಲ ಎನ್ನುತ್ತಿದ್ದಳು ಎಂದು ಆಕೆಯ ಪೋಷಕರೂ ಹೇಳಿದ್ದಾರೆ. ಹೀಗಾಗಿ ವೈದ್ಯೆ ರೇಪ್ ಆಂಡ್ ಮರ್ಡರ್  ನ ಹಿಂದೆ ಸಾಕಷ್ಟು ಅನುಮಾನಗಳಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments