Webdunia - Bharat's app for daily news and videos

Install App

13 ಗಂಟೆಗಳ ಕಾಲ ಪ್ರವಾಹದೊಂದಿಗೆ ಹೋರಾಡಿ ಬದುಕಿದ 62ರ ಮಹಿಳೆ

Webdunia
ಸೋಮವಾರ, 31 ಜುಲೈ 2017 (16:36 IST)
ದಾಮೋದರ್ ನದಿಯ ಪ್ರವಾಹ ಹೆಚ್ಚುತ್ತಿರುವುದನ್ನು ನೋಡುವ ಆಸಕ್ತಿಯಿಂದ ತೆರಳಿದ್ದ ಪೂರ್ವ ಬುರ್ದವಾನ್ ಜಿಲ್ಲೆಯ ಕಾಲಿಬಜಾರ್ ನಿವಾಸಿಯಾದ 62 ವರ್ಷ ವಯಸ್ಸಿನ ಅಂಗನವಾಡಿ ಮಹಿಳಾ ಉದ್ಯೋಗಿ ತಪಾತಿ ಚೌಧರಿ, ಕಾಲು ಜಾರಿ ನದಿಗೆ ಬಿದ್ದು ಸುಮಾರು 13 ಗಂಟೆಗಳ ಕಾಲ ನೀರಿನಲ್ಲಿ ತೇಲಾಡಿ 80 ಕಿ.ಮೀ ದೂರ ಪ್ರಯಾಣಿಸಿದ ನಂತರ ಜೀವ ಉಳಿಸಿಕೊಂಡ ವಿಚಿತ್ರ ಘಟನೆ ವರದಿಯಾಗಿದೆ. 
 
ನದಿಯ ಪ್ರವಾಹ ನೋಡಲು ಬಂದ ತಪಾಟಿ ಚೌಧರಿ, ಕಾಲು ಜಾರಿ ನದಿಗೆ ಬಿದ್ದ ಕೂಡಲೇ ಕ್ಷಣಾರ್ಧದಲ್ಲಿಯೇ ಕೊಚ್ಚಿಹೋಗಲು ಆರಂಭಿಸಿದಳು. ನೆರವಿಗಾಗಿ ಕೂಗಿದಳು. ಆದರೆ, ಹತ್ತಿರದಲ್ಲಿ ಯಾರು ಇರಲಿಲ್ಲವಾದ್ದರಿಂದ ಆಕೆಯ ಕೂಗು ಯಾರಿಗೂ ಕೇಳದಾಯಿತು. ಧೈರ್ಯ ತಂದುಕೊಂಡು ಪೂರ್ತಿ ರಾತ್ರಿ ಕೈ ಕಾಲು ಬಡಿಯುತ್ತಾ ಕಳೆದಿದ್ದಾಳೆ. ಆದರೆ, ಆಕೆಯ ಹೋರಾಟ ಕೊನೆಗೂ ವ್ಯರ್ಥವಾಗಲಿಲ್ಲ. 
 
ಮಾರನೇ ದಿನ ಬೆಳಿಗ್ಗೆ ಮಹಿಳೆಯೊಬ್ಬಳು ನೀರಿನಲ್ಲಿ ತೇಲುತ್ತಿರುವುದು ಕಂಡ ಮೀನುಗಾರರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಬಿಡುಗಡೆಗೊಳಿಸಲಾಗಿದೆ.
 
ಚೌಧರಿ ಹೇಳಿದರು, "ಈ ಸ್ಥಳವು ಹೂಗ್ಲಿ ಜಿಲ್ಲೆಯ ಪರ್ಸುರಾದಲ್ಲಿ ಮುಂಡೇಶ್ವರಿ ನದಿಯ ಮಾರ್ಕುಂಡ ಫೆರ್ರಿ ಘಾಟ್ ಎಂದು ನಾನು ತಿಳಿದುಕೊಂಡಿದ್ದೇನೆ, ಅವರು ನದಿಯೊಳಗೆ ಬಿದ್ದ ಸ್ಥಳದಿಂದ 80 ಕಿ.ಮೀ.
 
ಚಿಕಿತ್ಸೆಯ ನಂತರ ಚೇತರಿಸಿಕೊಂಡ ಮಹಿಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನದಿಗೆ ಬಿದ್ದ ಸ್ಥಳದಿಂದ 80 ಕಿ.ಮೀ ದೂರದಲ್ಲಿರುವ ಹೂಗ್ಲಿ ಜಿಲ್ಲೆಯ ಮುಂಡೇಶ್ವರಿ ನದಿಯ ಮಾರ್ಕುಂಡಾ ಘಾಟ್‌ ಬಳಿ ತಲುಪಿದ್ದೆ ಎಂದು ತಿಳಿಸಿದ್ದಾರೆ. 
 
ಆಘಾತದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗದ ಚೌಧರಿ, ಸಾವಿನ ದವಡೆಯಿಂದ ಹೇಗೆ ತಪ್ಪಿಸಿಕೊಂಡಿದ್ದೇನೆ ಎನ್ನುವುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ
Show comments