Webdunia - Bharat's app for daily news and videos

Install App

ಹೆತ್ತ ಮಗುವನ್ನು ರಸ್ತೆಗೆ ಎಸೆದ ತಾಯಿ, ಕೊಚ್ಚಿಯಲ್ಲಿ ಸಾರ್ವಜನಿಕರ ಬೆಚ್ಚಿಬೀಳಿಸಿದ ಘಟನೆ

Krishnaveni K
ಶುಕ್ರವಾರ, 3 ಮೇ 2024 (13:31 IST)
Photo Courtesy: Social media
ಕೊಚ್ಚಿ: ಹೆತ್ತ ಮಗುವನ್ನು ತಾಯಿಯೊಬ್ಬಳು ಕಸದ ಮೂಟೆ ಎಸೆಯುವಂತೆ ರಸ್ತೆಗೆ ಎಸೆದ ಘಟನೆ ಕೊಚ್ಚಿಯಲ್ಲಿ ನಡೆದಿದ್ದು, ದೃಶ್ಯ ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಕೊಚ್ಚಿಯಲ್ಲಿ ಈ ಘಟನೆ ನಡೆದಿದೆ.

ಕೊಚ್ಚಿಯ ವಿದ್ಯಾನಗರದ ಅಪಾರ್ಟ್ ಮೆಂಟ್ ಬಳಿಯ ರಸ್ತೆಗೆ ಮಗುವೊಂದನ್ನು ಎಸೆಯುವ ದೃಶ್ಯ ವೈರಲ್ ಆಗಿದೆ. ಈ ಅಪಾರ್ಟ್ ಮೆಂಟ್ ನಲ್ಲೇ ವಾಸಿಸುತ್ತಿದ್ದ ಯುವತಿ ಈ ಕೃತ್ಯವೆಸಗಿದ್ದಾಳೆನ್ನಲಾಗಿದೆ. ಈ ಸಂಬಂಧ 23 ವರ್ಷದ ಯುವತಿ ಮತ್ತು ಆಕೆಯ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುವತಿ ತನ್ನ ಮನೆಯ ವಾಶ್ ರೂಂನಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಮನೆಯವರ ಗಮನಕ್ಕೂ ಬಾರದಂತೆ ಮಗುವನ್ನು ರಸ್ತೆಗೆ ಎಸೆದಿದ್ದಾಳೆ. ರಸ್ತೆಗೆ ಮಗು ಬೀಳುವ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದೆ. ಮಗು ಹೆರಿಗೆಯಾಗಿ ಸುಮಾರು 3 ಗಂಟೆ ಬಳಿಕ ಈ ಕೃತ್ಯವೆಸಗಿದ್ದಾಳೆ ಎನ್ನಲಾಗಿದೆ.

ವಿಚಾರಣೆ ನಡೆಸಿದಾಗ ಪೋಷಕರಿಗೂ ತಮ್ಮ ಮಗಳು ಗರ್ಭಿಣಿಯಾಗಿದ್ದ ವಿಚಾರವೇ ಗೊತ್ತಿರಲಿಲ್ಲ ಎಂದಿದ್ದಾರೆ. ಮನೆಯವರ ಗಮನಕ್ಕೆ ತಾರದೇ ಯುವತಿ ಇಷ್ಟೆಲ್ಲಾ ಕೃತ್ಯವೆಸಗಿದ್ದಾಳೆ. ಬಹುಶಃ ಆಕೆ ಅತ್ಯಾಚಾರಕ್ಕೊಳಗಿರಬಹುದು. ಪರಿಣಾಮ ಗರ್ಭಿಣಿಯಾಗಿದ್ದ ಆಕೆ ಮನೆಯವರಿಂದ ವಿಚಾರ ಮುಚ್ಚಿಟ್ಟಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದೀಗ ಮಗುವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಮಗು ಹೆರಿಗೆಯಾದ ತಕ್ಷಣವೇ ಸಾವನ್ನಪ್ಪಿತ್ತೇ ಅಥವಾ ರಸ್ತೆಗೆ ಬಿದ್ದ ರಭಸಕ್ಕೆ ಸಾವನ್ನಪ್ಪಿದೆಯೇ ಎಂಬುದು ಪೋಸ್ಟ್ ಮಾರ್ಟಂ ವರದಿ ಬಳಿಕ ತಿಳಿದುಬರಲಿದೆ. ಇದೀಗ ಪೊಲೀಸರು ಯುವತಿ ಹಾಗೂ ಆಕೆಯ ಪೋಷಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುಟುಂಬ ಈ ಅಪಾರ್ಟ್ ಮೆಂಟ್ ನಲ್ಲಿ ಹಲವು ವರ್ಷಗಳಿಂದ ವಾಸವಿತ್ತು ಎನ್ನಲಾಗಿದೆ. ಕೊರಿಯರ್ ಕವರ್ ನಲ್ಲಿ ಮಗುವನ್ನು ಸುತ್ತಿ ರಸ್ತೆಗೆ ಎಸೆಯಲಾಗಿದೆ. ಬೆಳಿಗ್ಗೆ 8.15 ಕ್ಕೆ ಮಗುವನ್ನು ರಸ್ತೆಗೆ ಎಸೆಯಲಾಗಿತ್ತು. ರಸ್ತೆ ಶುಚಿಗೊಳಿಸುವಾಗ ಕಾರ್ಮಿಕರಿಗೆ ಮಗು ಸಿಕ್ಕಿದೆ. ಸಿಸಿಟಿವಿ ದೃಶ್ಯದಲ್ಲಿ ಕೃತ್ಯ ಬಯಲಾಗಿದೆ. ಪ್ರತೀ ಅಪಾರ್ಟ್ ಮೆಂಟ್ ನ ಮನೆಗೂ ಸಿಸಿಟಿವಿ ವ್ಯವಸ್ಥೆಯಿದ್ದು, ಇವುಗಳನ್ನು ಪರಿಶೀಲಿಸಿದ ನಂತರ ಮತ್ತಷ್ಟು ವಿವರಗಳು ಹೊರಬೀಳುವ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

Bakrid: ಅಲ್ಲಾಹನಿಗಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

ಮುಂದಿನ ಸುದ್ದಿ
Show comments