Webdunia - Bharat's app for daily news and videos

Install App

ಕರೆಂಟ್ ಬಿಲ್ ನೋಡಿ ಆಸ್ಪತ್ರೆಗೆ ದಾಖಲು!

Webdunia
ಸೋಮವಾರ, 1 ಜೂನ್ 2015 (10:36 IST)
ಪುಟ್ಟ ಕಿರಾಣಿ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದ ಕೃಷ್ಣ ಪ್ರಸಾದ್ ಅವರ ಕುಟುಂಬ ಪ್ರತಿ ತಿಂಗಳಿನಂತೆ ಈ ಬಾರಿಯೂ ಬಂದ ವಿದ್ಯುತ್ ಬಿಲ್‌ನ್ನು ತೆರೆದು ನೋಡಲಾಗಿ ಶಾಕ್‌ಗೆ ಒಳಗಾಗಿ ಬಿಟ್ಟಿತು. ಅವರಿಗೆ ಬಂದಿದ್ದು ಬರೊಬ್ಬರಿ  55 ಕೋಟಿ ಕರೆಂಟ್ ಬಿಲ್. ಈ ಬಿಲ್ ನೋಡಿ ಬಿಪಿ ಏರಿಸಿಕೊಂಡ ಪ್ರಸಾದ್  ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 
 
ಇದು ನಡೆದಿರುವುದು ರಾಂಚಿಯ ಕದ್ರುವಿನಲ್ಲಿ. ಕಿರಾಣಿ ಅಂಗಡಿ ಮಾಲೀಕ ಕೃಷ್ಣಪ್ರಸಾದ್‌ ಸಹೋದರ ಜಿತೇಂದ್ರ ಹೇಳುವ ಪ್ರಕಾರ  "ನಾವು  2 ಬೆಡ್‌ ರೂಮ್‌ನ ಮನೆಯಲ್ಲಿ ವಾಸವಾಗಿದ್ದೇವೆ 1 ಫ್ರಿಡ್ಜ್, 2 ಎಸಿ, 3 ಫ್ಯಾನ್‌ ಹೀಗೆ ಕೆಲ ವಿದ್ಯುತ್ ಚಾಲಿತ ಗೃಹಬಳಕೆ ವಸ್ತುಗಳು ನಮ್ಮ ಮನೆಯಲ್ಲಿವೆ. ಪ್ರತಿ ತಿಂಗಳು ಸಾಮಾನ್ಯವಾಗಿ ನಾವು 8,00ರೂಪಾಯಿ ವಿದ್ಯುತ್ ಬಿಲ್‌ನ್ನು ಪಡೆಯುತ್ತಿದ್ದೆವು. ಆದರೆ ಕಳೆದ 3 ತಿಂಗಳಿಂದ ನಮಗೆ ವಿದ್ಯುತ್ ಬಿಲ್ ಬಂದಿರಲಿಲ್ಲ. ಆದರೆ, 3 ತಿಂಗಳ ನಂತರ  ಕಳೆದ ಶನಿವಾರ ಬಂದ ವಿದ್ಯುತ್‌ ಬಿಲ್‌ ನೋಡಿ ನಮಗೆ ಆಘಾತವಾಯಿತು. ನಮ್ಮ ತಾಯಿ ಅಧಿಕ ರಕ್ತದೊತ್ತಡಕ್ಕೆ ಒಳಗಾದರು. ಕಾರಣ ನಮಗೆ ಬಂದಿದ್ದು 55,49,88,036 ರೂಪಾಯಿ ಕರೆಂಟ್ ಬಿಲ್",.
 
ವಿದ್ಯುತ್‌ ಮಂಡಳಿ ಸಿಬ್ಬಂದಿ ಉದಾಸೀನದಿಂದ ತಮ್ಮ ತಾಯಿ ಆಸ್ಪತ್ರೆ ಸೇರಿದ್ದು, ಮಂಡಳಿ ವಿರುದ್ಧ ನ್ಯಾಯಾಲಯ ದೂರು ನೀಡಲು ಕುಟುಂಬ ನಿರ್ಧರಿಸಿದೆ. 
 
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯುತ್‌ ಮಂಡಳಿ ಎಂಜಿನಿಯರ್ ರಾಜ್ ಕುಮಾರ್, "ಮೀಟರ್‌ ರೀಡಿಂಗ್‌ ಹೋದವರು ಮಾಡಿದ ತಪ್ಪಿನಿಂದ ಹೀಗಾಗಿದೆ. ಈಗ ನಾವದನ್ನು ಸರಿಪಡಿಸಿದ್ದೇವೆ. ನಿಜವಾಗಿಯೂ ನಾವು ಅವರಿಗೆ ನೀಡಬೇಕಾದಿದ್ದು 10,500 ಬಿಲ್", ಎಂದಿದ್ದಾರೆ. 
 
ಅದಕ್ಕೆ ಪ್ರತಿಕ್ರಿಯಿಸಿರುವ ಜಿತೇಂದ್ರ, "ನಮಗೆ ಬರಬೇಕಾಗಿರುವುದು 2,400 ಅಷ್ಟೇ, 10,500 ಅಲ್ಲ", ಎನ್ನುತ್ತಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಷ್ಟಚಾರದಿಂದ ಸರ್ಕಾರ ನಡೆಸುವ ಬದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ವಿಶ್ವೇಶ್ವರ ಹೆಗಡೆ

ಊಹಿಸಲಾಗದ ದುಃಖ, ಗಂಡಾಂತರ: ಕೋಡಿ ಶ್ರೀಗಳ ಶಾಕಿಂಗ್ ಭವಿಷ್ಯ

ಬಿಜೆಪಿ ಸೇರ್ಪಡೆ ಬಗ್ಗೆ ಅಪ್‌ಡೇಟ್‌ ನೀಡಿದ ಕೆ.ಎಸ್‌.ಈಶ್ವರಪ್ಪ: ಬಿಎಸ್‌ವೈಯನ್ನು ಹಾಡಿ ಹೊಗಳಿದ ಮಾಜಿ ಡಿಸಿಎಂ

ಕಾಂಗ್ರೆಸ್‌ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್‌ಗೆ ಮತ್ತೊಂದು ಟಾಸ್ಕ್‌ ನೀಡಿದ ಪ್ರಧಾನಿ ನರೇಂದ್ರ ಮೋದಿ

Gold Price: ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಇಳಿಕೆ

Show comments