ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಕಿಡ್ನಿ ಕಸಿ ರಾಕೆಟ್ ಕಿಂಗ್ಪಿನ್ ರಾಜ್ ಕುಮಾರ್ ರಾವ್ ಅವರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ.
ಆತನನ್ನು ದೆಹಲಿಗೆ ಕರೆತಂದು ವಿಶೇಷ ತನಿಖಾ ದಳದಿಂದ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ದಂಪತಿ ಸೇರಿದಂತೆ ಮೂವರು ಕಿಡ್ನಿ ದಾನಿಗಳನ್ನು ಸೋಮವಾರ ರಾತ್ರಿ ದೆಹಲಿ ಪೊಲೀಸರು ಬಂಧಿಸಿದ್ದರು.
ಕಿಡ್ನಿ ದಾನಿ ದಂಪತಿ ಉಮೇಶ್ ಶ್ರೀವಾತ್ಸವ್ ಮತ್ತು ನೀಲು ಶ್ರೀವಾತ್ಸವ್ ಅವರನ್ನು ಕಾನ್ಪುರದಲ್ಲಿ ಬಂಧಿಸಲಾಗಿತ್ತು. ಮತ್ತೊಬ್ಬ ದಾನಿ ಮೊಮಿತಾಳನ್ನು ಸಿಲಿಗುರಿಯಲ್ಲಿ ಬಂಧಿಸಲಾಗಿತ್ತು. ಆಕೆ ಕಳೆದ ವಾರ ಬಂಧನಕ್ಕೊಳಗಾಗಿದ್ದ ದೇವಶೀಶ್ ಮೌಲಿಕ್ ಪತ್ನಿಯಾಗಿದ್ದಾಳೆ.
ರಾವ್ ಮತ್ತು ಮೂವರು ದಾನಿಗಳ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವವರ ಸಂಖ್ಯೆ 9ಕ್ಕೇರಿದೆ.
ಕಳೆದ ವಾರ, ಅಪೋಲೋ ಆಸ್ಪತ್ರೆಯ ಹಿರಿಯ ಮೂತ್ರಪಿಂಡಶಾಸ್ತ್ರಜ್ಞರ ಇಬ್ಬರು ಸಹಾಯಕರನ್ನು ಮೂತ್ರಪಿಂಡ ರಾಕೆಟ್ಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.