ಕಾಂಚೀಪುರಂನ ಕೋವತ್ತೂರ್ನಲ್ಲಿ ಗೋಲ್ಡನ್ ರೆಸಾರ್ಟ್ನಿಂದ ತಪ್ಪಿಸಿಕೊಂಡು ಬಂದಿದ್ದ ಶಾಸಕ ಶರವಣ್ ಕೂವತ್ತೂರ್ ಪೊಲೀಸ್ ಠಾಣೆಯಲ್ಲಿ ಶಶಿಕಲಾ ಮತ್ತು ಅವರ ಸಹಚರರ ವಿರುದ್ಧ ಅಪಹರಣ ದೂರು ದಾಖಲಿಸಿದ್ದಾರೆ.
ತಮ್ಮನ್ನು ಶಶಿಕಲಾ ಬೆಂಬಲಿಗರು ಅಪಹರಿಸಿ ಗೋಲ್ಡನ್ ಬೇ ರೆಸಾರ್ಟ್ನಲ್ಲಿ ಬಂಧನಕ್ಕೊಳಗಾಗಿಸಿದ್ದರು ಎಂದು ಶರವಣ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ದಾಖಲಿಸಿದ್ದಾರೆ.
ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಸಿಎಂ ಅಧಿಕಾರ ತಪ್ಪಿಸಲು ಅವರ ಬೆಂಬಲಿಗ ಶಾಸಕರನ್ನು ಅಪಹರಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಐಎಢಿಎಂಕೆ ಪ್ರದಾನ ಕಾರ್ಯದರ್ಶಿ ಶಶಿಕಲಾ ತಮ್ಮ ಬಣದ ಶಾಸಕರನ್ನು ಗೋಲ್ಡನ್ ಬೇ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿಸಿದ್ದರು. ಅದರಲ್ಲಿ ಕೆಲವರು ಸೆಲ್ವಂ ಬೆಂಬಲಿಗರಿದ್ದರು ಎನ್ನಲಾಗಿದೆ. ಸೆಲ್ವಂ ಬೆಂಬಲಿಗರಿಗೆ ಬೆದರಿಕೆಯೊಡ್ಡಲಾಗಿತ್ತು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.