Webdunia - Bharat's app for daily news and videos

Install App

Kerala Tiger: ಕೇರಳದಲ್ಲಿ ಮಹಿಳೆಯ ತಿಂದು ಹಾಕಿದ ಹುಲಿ ಸತ್ತ ಮೇಲೂ ಕಣ್ಣು ನೋಡಿದರೆ ಭಯವಾಗುವಂತಿದೆ: ವಿಡಿಯೋ

Krishnaveni K
ಸೋಮವಾರ, 27 ಜನವರಿ 2025 (14:01 IST)
Photo Credit: X
ವಯನಾಡು: ಕೇರಳದ ವಯನಾಡಿನಲ್ಲಿ ಮಹಿಳೆಯೊಬ್ಬರನ್ನು ಕೊಂದು ತಿಂದು ಹಾಕಿದ ನರಭಕ್ಷಕ ಹುಲಿ ಈಗ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಸತ್ತ ಮೇಲೂ ಹುಲಿಯ ಕಣ್ಣು ನೋಡಿದರೆ ಅರೆಕ್ಷಣ ಭಯವಾಗುವಂತಿದೆ.

ಕೇರಳದ ವಯನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರು ರಾತ್ರಿ ಓಡಾಡಲೂ ಭಯಪಡುವ ಪರಿಸ್ಥಿತಿಯಿತ್ತು. ಇದಕ್ಕೆ ಕಾರಣ ನರಹಂತಕ ಹುಲಿ. ಕಳೆದ ವಾರ ಕಾಫಿ ಪ್ಲ್ಯಾಂಟೇಷನ್ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಈ ಹುಲಿ ಕೊಂದು ತಿಂದು ಹಾಕಿತ್ತು.

ಇದರ ಬೆನ್ನಲ್ಲೇ ಜನರಲ್ಲಿ ಭಯಹುಟ್ಟಿತ್ತು. ಹೀಗಾಗಿ ಈ ಹುಲಿಯನ್ನು ಜೀವಂತ ಇಲ್ಲವೇ ಹತ್ಯೆ ಮಾಡಿಯಾದರೂ ಸೆರೆಹಿಡಿಯಬೇಕು ಎಂದು ಅರಣ್ಯಾಧಿಕಾರಿಗಳು ಪಣ ತೊಟ್ಟಿದ್ದರು. ನರಹಂತಕ ಹುಲಿಗಾಗಿ ಹುಡುಕಾಟವೂ ಶುರುವಾಗಿತ್ತು.

ಆದರೆ ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಪಿಲಕ್ಕಾವು ಪ್ರದೇಶದಲ್ಲಿ ನರಹಂತಕ ಹುಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಎಲ್ಲಾ ರೀತಿಯ ಔಪಚಾರಿಕತೆ ಮುಗಿಸಿದ ಅರಣ್ಯಾಧಿಕಾರಿಗಳು ಹುಲಿಯ ಮೃತದೇಹವನ್ನು ಬಲೆಯಲ್ಲಿ ಹಾಕಿ ಹೊತ್ತೊಯ್ದಿದ್ದಾರೆ. ವಿಶೇಷವೆಂದರೆ ಸತ್ತ ಮೇಲೂ ಹುಲಿಯ ಹೊಳೆಯುವ ಕಣ್ಣುಗಳು ಭಯಹುಟ್ಟಿಸುವಂತಿತ್ತು. ಈ ವಿಡಿಯೋ ಇಲ್ಲಿದೆ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಮುಂದಿನ ಸುದ್ದಿ
Show comments