Webdunia - Bharat's app for daily news and videos

Install App

ಹಿಂದೂಗಳ ಭಾವನೆ ಧಕ್ಕೆ ತಂದ ಕೇರಳ ಪಠ್ಯ ಪುಸ್ತಕದ ಚಿತ್ರ

Krishnaveni K
ಶನಿವಾರ, 6 ಏಪ್ರಿಲ್ 2024 (15:35 IST)
Photo Courtesy: Twitter
ತಿರುವನಂತಪುರಂ: ಪಠ್ಯ ಪುಸ್ತಕದಲ್ಲಿ ಕೆಲವೊಂದು ತಪ್ಪುಗಳು, ಉದ್ದೇಶಪೂರ್ವಕವಾಗಿ ನಡೆಯುತ್ತದೋ ಇಲ್ಲವೇ ಉದ್ದೇಶಪೂರ್ವಕವಾಗಿರದೇ ಅನಿರೀಕ್ಷಿತವಾಗಿ ನಡೆಯುತ್ತದೋ ಗೊತ್ತಿಲ್ಲ. ಆದರೆ ಹಲವು ಬಾರಿ ಪಠ್ಯ ಪುಸ್ತಕಗಳಲ್ಲಿ ನೀಡುವ ಕೆಲವೊಂದು ವಿಚಾರಗಳು ವಿವಾದಕ್ಕೆ ಕಾರಣವಾಗುವುದು ಇದೆ.

ಇದೀಗ ಕೇರಳದ ಇಂಗ್ಲಿಷ್ ಭಾಷೆಯ ಪಠ್ಯ ಪುಸ್ತಕದಲ್ಲಿ ನೀಡಲಾಗಿರುವ ಕೆಲವೊಂದು ಚಿತ್ರಗಳು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವರು ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಜೊತೆಗೆ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಎರಡು ಸಿಹಿ ತಿಂಡಿ ಮಾರುವವ ಚಿತ್ರ ನೀಡಲಾಗಿದೆ. ಈ ಪೈಕಿ ಹಿಂದೂ ಹೆಸರಿರುವ ವ್ಯಕ್ತಿಯ ಅಂಗಡಿ ಸಿಹಿ ತಿನಿಸುಗಳು ನೊಣ ಮುತ್ತಿಕೊಂಡು ಶುಚಿಯಾಗಿಲ್ಲ ಎಂದು ತೋರಿಸಲಾಗಿದೆ. ಮುಸ್ಲಿಂ ವ್ಯಕ್ತಿಯ ಹೆಸರಿರುವ ಚಿತ್ರದಲ್ಲಿ  ಸಿಹಿ ತಿಂಡಿಗಳು ಒಪ್ಪವಾಗಿ ಜೋಡಿಸಿರುವುದಲ್ಲದೆ, ಶುಚಿಯಾಗಿರುವಂತೆ ತೋರಿಸಲಾಗಿದೆ.

ಅದೇ ರೀತಿ ಇನ್ನೊಂದು ಪುಟದಲ್ಲಿ ಹಿಂದೂ ವ್ಯಕ್ತಿಯ ಹೆಸರು ಹಾಕಿ ಆತ ಶುಚಿಯಾಗಿಲ್ಲ. ಮುಸ್ಲಿಂ ವ್ಯಕ್ತಿಯ ಹೆಸರು ಹಾಕಿ ಆತ ಶುಚಿಯಾಗಿರುತ್ತಾನೆ ಎಂದು ವಿವರಿಸಲಾಗಿದೆ. ಈ ಎರಡೂ ಚಿತ್ರಗಳು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಶುಚಿಯಾಗಿಲ್ಲದಿರುವ ಹೆಸರು ಹಿಂದೂಗಳದ್ದೇ ಯಾಕೆ ಆಗಿರಬೇಕು. ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಈ ರೀತಿ ಹಿಂದೂಗಳ ಬಗ್ಗೆ ಕೆಟ್ಟ ಭಾವನೆ ಬರುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದೇ ಕಾರಣಕ್ಕೆ ಕೇರಳ ಲವ್ ಜಿಹಾದ್ ಪ್ರಕರಣದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments