Select Your Language

Notifications

webdunia
webdunia
webdunia
webdunia

ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಕೊಂದ ಅಪ್ರಾಪ್ತರು

ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಕೊಂದ ಅಪ್ರಾಪ್ತರು
ಕಾಸರಗೋಡು , ಶುಕ್ರವಾರ, 21 ನವೆಂಬರ್ 2014 (09:32 IST)
ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನೊಬ್ಬನನ್ನು ಆತನ ಸ್ನೇಹಿತರೇ ಕೊಲೆ ಮಾಡಿದ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.

ಬಾಲಕನ ಕಣ್ಣಿಗೆ ತ್ರಿಜ್ಯ/ ಕೈವಾರ ದಿಂದ ಇರಿದು ನಂತರ ಕೆರೆ ನೀರಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಕಾಸರಗೋಡು ಉತ್ತರ ಜಿಲ್ಲೆಯ ಹೊಸದುರ್ಗ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ನಡೆಸುತ್ತಿದ್ದ ಬಾಲಕ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಸಮಯದಲ್ಲಿ , ಆತನ ಇಬ್ಬರು ಸಹಪಾಠಿಗಳ ಜತೆ  ಪ್ರೇಮ ಪ್ರಕರಣವೊಂದರ ಸಂಬಂಧ ಜಗಳ ನಡೆದಿದೆ ಎನ್ನಲಾಗಿದೆ. ಜಗಳ ತೀವೃತೆಗೆ ತೆರಳಿ ಆತನ ಕಣ್ಣಿಗೆ ಕೈವಾರದಿಂದ ಚುಚ್ಚಿದ ಸ್ನೇಹಿತರು, ಕಣ್ಣಿಗೆ ಗಂಭೀರ ಗಾಯವಾದಾಗ ಅದನ್ನು ತೊಳೆಯುವ ನೆಪದಿಂದ ಕೆರೆಯ ಬಳಿ ಆತನನ್ನು ಕೊಂಡೊಯ್ದಿದ್ದಾರೆ ಮತ್ತು ನೀರಲ್ಲಿ ಮುಳುಗಿಸಿ ಆತನನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ. 
 
ಮರುದಿನ ಬೆಳಿಗ್ಗೆ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆಯಾಯಿತು. ಇಬ್ಬರು ಬಾಲಾಪರಾಧಿಗಳು ಈಗ ಪೊಲೀಸರ ವಶದಲ್ಲಿದ್ದಾರೆ. 

Share this Story:

Follow Webdunia kannada