Webdunia - Bharat's app for daily news and videos

Install App

ಓಟಿಗಾಗಿ ನೋಟು ಹೇಳಿಕೆಯನ್ನು ಪುನರಾರ್ವತಿಸಿದ ಕೇಜ್ರಿವಾಲ್

Webdunia
ಶನಿವಾರ, 24 ಜನವರಿ 2015 (11:57 IST)
ಚುನಾವಣಾ ಆಯೋಗದಿಂದ ನೋಟಿಸ್ ಪಡೆದ ನಂತರವು ಕೂಡ ಆಪ್ ನಾಯಕ ಅರವಿಂದ ಕೇಜ್ರಿವಾಲ್, ಮತದಾರರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹಣ ನೀಡಿದರೆ ಸ್ವೀಕರಿಸಿ ಎಂಬ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ. 
 
ಶುಕ್ರವಾರ ಛತ್ರಪುರ ಮತ್ತು ದೇವಲಿ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಕೇಜ್ರಿವಾಲ್, "ಸದ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಡೆಯವರು ನಿಮಗೆ ಹಣ ನೀಡಲು ಬರಲಿದ್ದಾರೆ. ನೀವು ಆ ಹಣವನ್ನು ನಿರಾಕರಿಸಬೇಡಿ. ಅವರು ನಿಮಗೆ ಅಕ್ಕಿ ಅಥವಾ ಕಂಬಳಿಯನ್ನು ಸಹ ಕೊಡಬಹುದು. ಅವೆಲ್ಲವನ್ನು ಪಡೆದುಕೊಳ್ಳಿ. ಆದರೆ ಮತವನ್ನು ಮಾತ್ರ ಆಮ್ ಆದ್ಮಿ ಪಕ್ಷಕ್ಕೆ ನೀಡಿ", ಎಂದು ಜನರಿಗೆ ಸಲಹೆ ನೀಡಿದ್ದಾರೆ. 
 
ಕಳೆದ ವಾರ ಸಹ ಅವರು ಈ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಜನವರಿ 27 ರವರೆಗೆ ಸ್ಪಷ್ಟೀಕರಣ ನೀಡುವಂತೆ  ಸೂಚಿಸಿದೆ. ಆದರೆ ಈ ಕುರಿತು ತಲೆಕೆಡಿಸಿಕೊಳ್ಳದ ಕೇಜ್ರಿವಾಲ್ ತಮ್ಮ ಮಾತನ್ನು ಪುನರಾವರ್ತಿಸಿದ್ದಾರೆ. 
 
ತಮ್ಮ ಭಾಷಣದ ಸಂದರ್ಭದಲ್ಲಿ ಆಪ್ ನಾಯಕ ಹಣ ಪಡೆಯಿರಿ, ಆದರೆ ಮದ್ಯವನ್ನು ಮಾತ್ರ ಪಡೆಯಬೇಡಿ. ಅದು ಆರೋಗ್ಯಕ್ಕೆ ಅಪಾಯಕಾರಿಯಾದುದು. ಕುಟುಂಬವನ್ನು ಸರ್ವನಾಶಕ್ಕೆ ತಳ್ಳುತ್ತದೆ ಎಂದು ಸಲಹೆ ನೀಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments