Webdunia - Bharat's app for daily news and videos

Install App

ಪ್ರಧಾನಿಗೆ ಆಪ್ ಎಂದರೆ ಭಯ: ಕೇಜ್ರಿವಾಲ್ ಟ್ವೀಟ್

Webdunia
ಮಂಗಳವಾರ, 14 ಜೂನ್ 2016 (15:01 IST)
ಸಂಸದೀಯ ಕಾರ್ಯದರ್ಶಿಗಳ ಸ್ಥಾನವನ್ನು ಲಾಭದಾಯಕ ಹುದ್ದೆಯಿಂದ ಹೊರಗಿಡುವ ದೆಹಲಿ ಸರಕಾರದ ವಿಧೇಯಕವನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ತಿರಸ್ಕರಿಸುತ್ತಿದ್ದಂತೆ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತೆ ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. 

ಮೋದಿ ಅವರಿಗೆ ಆಪ್ ಎಂದರೆ ಭಯ ಎಂದು ಅವರು ವ್ಯಂಗ್ಯವಾಡಿದ್ದಾರೆ. 
 
ನಮ್ಮ ಸರ್ಕಾರದಲ್ಲಿ ಒಬ್ಬ ಶಾಸಕ ವಿದ್ಯುತ್ ಕ್ಷೇತ್ರಕ್ಕೆ, ಇನ್ನೊಬ್ಬ ನೀರು, ಮತೊಬ್ಬಆಸ್ಪತ್ರೆ, ಮಗದೊಬ್ಬ ಶಾಲೆ- ಹೀಗೆ ಒಂದೊಂದು ಕ್ಷೇತ್ರಕ್ಕೆ ಒಬ್ಬೊಬ್ಬ ಶಾಸಕರನ್ನು ಮೀಸಲಾಗಿಡಲಾಗಿದೆ. ನಮ್ಮ ಕಾರ್ಯವೈಖರಿಯಿಂದ ಮೋದಿ ಅವರಿಗೆ ಆತಂಕ ಸುರುವಾಗಿದೆ. ಹೀಗಾಗಿ ನಾನು ಸಹ ಉತ್ತಮ ಕೆಲಸಗಳನ್ನು ಮಾಡುವುದಿಲ್ಲ. ನಿಮಗೂ ಮಾಡಗೊಡುವುದಿಲ್ಲ ಎಂದು ಅವರು ತೋರಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಮೋದಿ ವಿರುದ್ಧ ಟ್ವೀಟರ್‌ನಲ್ಲಿ ಸಮರ ಸಾರಿದ್ದಾರೆ.
 
ಸಂಸದೀಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದ 21 ಶಾಸಕರುಗಳಿಗೆ ಅವರ ಸೇವೆಗೆ ಪ್ರತಿಯಾಗಿ ಯಾವುದೇ ರೀತಿಯ ಸಂಭಾವನೆ ನೀಡಲಾಗುತ್ತಿರಲಿಲ್ಲ. ಅವರಲ್ಲಿ ಯಾರಿಗೂ ಒಂದೇ ಒಂದು ರೂಪಾಯಿಯನ್ನು, ನಿವಾಸ, ವಾಹನ ನೀಡಲಾಗಿಲ್ಲ. ಎಲ್ಲರೂ ಉಚಿತವಾಗಿ  ಸೇವೆ ಸಲ್ಲಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. 
 
ಸಂಸದೀಯ ಕಾರ್ಯದರ್ಶಿಯಂತಹ ಲಾಭದಾಯಕ ಹುದ್ದೆಯನ್ನು ಹೊಂದಿರುವ ದೆಹಲಿ ಸರ್ಕಾರದ 21 ಶಾಸಕರನ್ನು ಅನರ್ಹಗೊಳಿಸಲು ಕೋರಿ ರಾಷ್ಟ್ರಪತಿಯವರಿಗೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರ 1997ರ ದಿಲ್ಲಿ ವಿಧಾನಸಭಾ ಕಾಯ್ದೆ (ಅನರ್ಹತೆ) ಕಾಯ್ದೆಗೆ ತಿದ್ದುಪಡಿ ತಂದು ಸಂಸದೀಯ ಕಾರ್ಯದರ್ಶಿ ಸ್ಥಾನವನ್ನು ಲಾಭದಾಯಕ ಹುದ್ದೆಯಿಂದ ಹೊರಗಿರಿಸಲು ಪ್ರಯತ್ನಿಸಿತ್ತು. ಇದಕ್ಕೆ ದೆಹಲಿ  ವಿಧಾನಸಭೆಯ ಅನುಮೋದನೆಯೂ ದೊರೆತಿತ್ತು. ಬಳಿಕ ರಾಷ್ಟ್ರಪತಿಯವರ ಅನುಮೋದನೆಗೆ ಕಳಿಸಲಾಗಿತ್ತು. ಆದರೆ ರಾಷ್ಟ್ರಪತಿಯವರು ಇದಕ್ಕೆ ಅನುಮೋದನೆ ನೀಡಿಲ್ಲ. ಹೀಗಾಗಿ 21 ಶಾಸಕರಿಗೆ ಅನರ್ಹತೆ ಭೀತಿ ಎದುರಾಗಿದೆ.
 
ಒಂದು ವೇಳೆ ಅವರು ಶಾಸಕತ್ವದಿಂದ ಅನರ್ಹರಾದರೆ ಆ ಸ್ಥಾನಗಳಿಗೆ ಮತ್ತೊಮ್ಮೆ ಚುನಾವಣೆ ಎದುರಾಗಲಿದೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ  ಆಪ್ 67 ಸ್ಥಾನಗಳನ್ನು ಹೊಂದಿದೆ. ಅವರಲ್ಲಿ 21 ಶಾಸಕರು ಅನರ್ಹರಾದರೆ ಆಪ್‌ ಶಾಸಕರ ಸಂಖ್ಯೆ 46ಕ್ಕಿಳಿಯಲಿದೆ. ಆದರೆ ಬಹುಮತಕ್ಕೆ 36 ಸ್ಥಾನವಷ್ಟೇ ಅಗತ್ಯವಿರುವುದರಿಂದ ಸರಕಾರಕ್ಕೆ ಪತನದ ಆತಂಕವಿಲ್ಲ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್, ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಟೆಹ್ರಾನ್‌ನಿಂದ ಭಾರತೀಯ ಸಾವಿರ ವಿದ್ಯಾರ್ಥಿಗಳು ಸ್ಥಳಾಂತರ

ಬರ್ತಡೇ ದಿನವೇ ಕಣ್ಣೀರು ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು, Video Viral

ಭಾನುವಾರ ನಮ್ಮ ಮೆಟ್ರೋ ವ್ಯತ್ಯಯ: ಯಾವ ಮಾರ್ಗದಲ್ಲಿ ಮೆಟ್ರೊ ಇಲ್ಲ ಇಲ್ಲಿದೆ ವಿವರ

ವಿಮಾನವನ್ನು ಕ್ರ್ಯಾಶ್ ಮಾಡುವುದಾಗಿ ವಿಮಾನದೊಳಗೆ ಬೆಂಗಳೂರು ವೈದ್ಯೆ ಚೀರಾಟ, ಹೊರಕಳುಹಿಸಿದ ಕ್ಯಾಬಿನ್ ಸಿಬ್ಬಂದಿ

ಮುಂದಿನ ಸುದ್ದಿ
Show comments