ತಾವು ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಕೇಜ್ರಿವಾಲ್ ಅವರಿಗೆ ಇಷ್ಟವಿಲ್ಲದಿದ್ದರಿಂದ ತಾವು ಆಮ್ ಆದ್ಮಿಯನ್ನು ಸೇರುವುದಿಲ್ಲ ಎಂದು ನವಜೋತ್ ಸಿಂಗ್ ಸಿದು ಹೇಳಿದ್ದಾರೆ.
ಬದಲಿಗೆ ದೆಹಲಿ ಮುಖ್ಯಮಂತ್ರಿ ತಮಗೆ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡುವಂತೆ ಹೇಳಿದರು. ಪಕ್ಷ ಅಧಿಕಾರಕ್ಕೆ ಬಂದರೆ ಅಕಾಲಿ ದಳದ ಹಾಲಿ ಶಾಸಕಿ ನವಜೋತ್ ಕೌರ್ ಸಿದುಗೆ ಸಚಿವ ಪದವಿ ನೀಡುವುದಾಗಿ ಭರವಸೆ ನೀಡಿದ್ದರು.
ಗುರುವಾರ ಮಾದ್ಯಮವನ್ನು ಉದ್ದೇಶಿಸಿ, ಹೊಸ ರಾಜಕೀಯ ಸಂಘಟನೆ ಆವಾಜ್ ಎ ಪಂಜಾಬ್ ಸ್ಥಾಪಿಸುವ ಯೋಜನೆಯನ್ನು ಸಿದು ಬಹಿರಂಗ ಮಾಡಿದರು. ಇದು ಪಕ್ಷವಲ್ಲ, ಪಂಜಾಬ್ ಉಳಿವಿಗಾಗಿ ಸಮಾನ ಮನಸ್ಕ ಜನರ ವೇದಿಕೆ ಎಂದು ಹೇಳಿದರು.
ಸಿದು ಆಡಳಿತರೂಢ ಬಾದಲ್ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿದರು. ಆದರೆ ಕಾಂಗ್ರೆಸ್ ಸೇರಿ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧವೂ ಪಂಚ್ಗಳನ್ನು ಎಸೆದರು. ಕೇಜ್ರಿವಾಲ್ ಅವರಿಗೆ ಕೇವಲ ಎಸ್ ಮ್ಯಾನ್ ಮಾತ್ರ ಬೇಕಿದೆ. ಅವರ ವಿರುದ್ಧ ಬೆರಳು ತೋರಿಸುವ ಜನರು ಬೇಕಿಲ್ಲ ಎಂದು ಟೀಕಿಸಿದರು.