Webdunia - Bharat's app for daily news and videos

Install App

ಗನ್ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆ ಹರಿಸಲಾಗುವುದಿಲ್ಲ: ಮುಫ್ತಿ

Webdunia
ಬುಧವಾರ, 17 ಆಗಸ್ಟ್ 2016 (17:54 IST)
ಬಂದೂಕಿನ ಮೂಲಕ ಕಾಶ್ಮೀರದ ಸಮಸ್ಯೆನ್ನು ಬಗೆ ಹರಿಸಲಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
 
ಯಾವುದೇ ಸಮಸ್ಯೆಯನ್ನು ಗನ್ ಮೂಲಕ ಬಗೆಹರಿಸಲಾಗುವುದಿಲ್ಲ. ಮಾತುಕತೆಯೊಂದೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಾರ್ಗ ಎಂದಿದ್ದಾರೆ ಮುಫ್ತಿ.
 
ಎಲ್ಲ ಮಧ್ಯವರ್ತಿಗಳ ಜತೆ ಮಾತುಕತೆ ನಡೆಸುವ ಮೂಲಕ ರಾಜ್ಯ ಎದುರಿಸುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವತ್ತ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಡೆಯನ್ನಿಡಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. 
 
ಕಾಶ್ಮೀರದ ಸನ್ನಿವೇಶವನ್ನು ಸಂಸತ್ತಿನ ಎರಡು ಸದನಗಳಲ್ಲಿ ಚರ್ಚಿಸಲಾಗಿದೆ. 2008 ಮತ್ತು 2010 ಪುನರಾವರ್ತನೆಯಾಗುವುದಿಲ್ಲ ಎಂದು ನಂಬಿರುತ್ತೇನೆ. ಈ ಬಾರಿ ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಚರ್ಚೆಗೊಳಪಡುವ ಭರವಸೆ ನನಗಿದೆ. ಪ್ರತಿಯೊಬ್ಬರ ಜತೆ ಮಾತುಕತೆಯಾಗಬೇಕು ಎಂದು ಅವರು ಹೇಳಿದ್ದಾರೆ. 
 
'ಜಮ್ಮು ಮತ್ತು ಕಾಶ್ಮೀರದ ಜನರು ಕೆಟ್ಟವರಲ್ಲ. ಭಾರತವೂ ಕೆಟ್ಟದಲ್ಲ.  ಚುನಾವಣಾ ಲಾಭಕ್ಕಾಗಿ ತಪ್ಪನ್ನೆಸಗಲಾಗಿದೆ', ಎಂದಿದ್ದಾರೆ ಮುಫ್ತಿ. 
 
ಆಗಸ್ಟ್ 15 ರಂದು ಧ್ವಜಾರೋಹಣ ನಡೆಸಿ ಮಾತನ್ನಾಡುತ್ತಿದ್ದ ಅವರು, ಪ್ರಜಾಪ್ರಭುತ್ವದ ಬಹುದೊಡ್ಡ ಭಾಗ ಮಾತುಕತೆ. ಈ ಮೂಲಕ ನಾವು ಅನೇಕ ಸಮಸ್ಯೆಗಳಮ್ಮು ಬಗೆಹರಿಸಿದ್ದೇನೆ. ಆದರೆ ಕಾಶ್ಮೀರದ ವಿಷಯದಲ್ಲಿ ಯಾಕೆ ಸೋತಿದ್ದೇವೆ? ನಾವು ತಪ್ಪೆಸಗಿದ್ದು ಎಲ್ಲಿ? ಎಂದವರು ಭಾವನಾತ್ಮಕವಾಗಿ ಮಾತನ್ನಾಡಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments