Webdunia - Bharat's app for daily news and videos

Install App

ಕರ್ನಾಟಕದ ಐಎಎಸ್ ಅದಿಕಾರಿ ಸಹೋದರಿ ನಿಗೂಢ ಸಾವು

Webdunia
ಭಾನುವಾರ, 6 ಆಗಸ್ಟ್ 2017 (21:07 IST)
ಕರ್ನಾಟಕದ ಐಎಎಸ್ ಅದಿಕಾರಿ, ಕಲಬುರಗಿ ಜಿಲ್ಲ ಪಂಚಾಯ್ತಿ ಸಿಇಓ ಹೆಬ್ಸಿಬಾ ರಾಣಿ ಸಹೋದರಿ ಸೂರ್ಯಕುಮಾರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. 5 ದಿನಗಳಿಂದ ನಾಪತ್ತೆಯಾಗಿದ್ದ ವೈದ್ಯೆ ಸೂರ್ಯಕುಮಾರಿ ವಿಜಯವಾಡದ ರಾಯ್ವೇಸ್ ಕಾಲುವೆ ಬಳಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಕಾಲುವೆ ಬಳಿ ವೈದ್ಯೆಯ ಕಾರು ಅನಾಥವಾಗಿ ನಿಂತಿದ್ದನ್ನ ಕಾರನ್ನ ಗಮನಿಸಿದ ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಕಾರ್ಯಾಚರಣೆ ನಡೆಸಿ ಕಾಲುವೆಯಲ್ಲಿ ಶವ ಹೊರತೆಗೆದಿದ್ದಾರೆ, ಶವ ಕೊಳೆತು ಗುರುತು ಹಿಡಿಯಲಾಗದಷ್ಟು ಹಾಳಾಗಿತ್ತು ಎಂದು ತಿಳಿದು ಬಂದಿದೆ.

 ವೈದ್ಯೆ ನಾಪತ್ತೆಯಾದಾಗಲೇ ಪೋಷಕರು ನೀಡಿದ ಅಪಹರಣ ದೂರಿನ ಮೇರೆಗೆ ಟಿಡಿಪಿ ಮಾಜಿ ಶಾಸಕ ಜಯರಾಜ್ ಮಗ ವಿದ್ಯಾಸಾಗರ್`ನನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಸೂರ್ಯಕುಮಾರಿಯ ಕೊನೆಯ ಮೆಸೇಜ್ ವಿದ್ಯಾಸಾಗರ್`ಗೆ ಹೋಗಿದ್ದು ನೀನಿಲ್ಲದೆ ನಾನು ಬದುಕುವುದಿಲ್ಲ ಎಂದಿರುವುದು ಭಾರೀ ಅನುಮಾನಕ್ಕೆ ಎಡೆಮಾಡಿದೆ. ವಿದ್ಯಾಸಾಗರ್`ಗೆ ಮದುವೆಯಾಗಿ 2 ಮಕ್ಕಳಿದ್ದರೂ ವೈದ್ಯೆ ಜೊತೆ ಪ್ರೇಮದಾಟವಾಡಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments