Webdunia - Bharat's app for daily news and videos

Install App

ಹೃದಯಸ್ಪರ್ಶಿ: ಜೀವವನ್ನುಳಿಸಲು ಭಯ ಬಿಟ್ಟ ವೈದ್ಯರು

Webdunia
ಶುಕ್ರವಾರ, 16 ಸೆಪ್ಟಂಬರ್ 2016 (14:57 IST)
ಕಾವೇರಿ ನೀರಿಗಾಗಿ ಎರಡು ರಾಜ್ಯಗಳು ಹೊತ್ತಿ ಉರಿಯುತ್ತಿರುವ ನಡುವೆ ಕೇಳಿ ಬಂದ ಹೃದಯ ಕಲಕುವ ಕಥೆ ಇದು. ಬೆಂಗಳೂರಿನ ವೈದ್ಯರ ತಂಡವೊಂದು ಲಿವರ್ ಕಸಿಗೊಳಗಾಗ ಬೇಕಿದ್ದ ರೋಗಿಯೊಬ್ಬರ ಜತೆ ರಾತ್ರಿ 1 ಗಂಟೆ ಸುಮಾರಿಗೆ ತಮಿಳುನಾಡಿಗೆ ಪ್ರಯಾಣ ಬೆಳೆಸಿ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮಾಡಿ ಹಿಂತಿರುಗಿದ್ದಾರೆ. ದಾನಿ ಕುಟುಂಬ ತಮಿಳುನಾಡಿನ ಈರೋಡ್‌ನದಾಗಿತ್ತು. 

ಇಂತಹ ವಿಷಮ ಪರಿಸ್ಥಿತಿಯಲ್ಲಿ ಕೂಡ ತಮ್ಮ ವೈದ್ಯ ಧರ್ಮವನ್ನು ಮಾಡಲು ಪಣತೊಟ್ಟ ಡಾಕ್ಟರ್ ಎ. ಒಲಿತ್‌ಸೆಲ್ವನ್ ನೇತೃತ್ವದ ತಂಡ ಕಳೆದೆರಡು ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವ ಮಹಾರಾಷ್ಟ್ರದ ನಾಗ್ಪುರದ 55 ವರ್ಷದ ರೋಗಿಯ ಜೀವವನ್ನು ಉಳಿಸಲು ಮುಂದಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಅವರು ಕಸಿಗಾಗಿ ಕಾಯುತ್ತಿದ್ದರು. 
 
ಈ ಕುರಿತು ಪ್ರತಿಕ್ರಿಯಿಸುವ  ಒಲಿತ್‌ಸೆಲ್ವನ್, ಎರಡು ರಾಜ್ಯಗಳ ನಡುವಿನ ಈ ವಿಷಮ ಪರಿಸ್ಥಿತಿಯಲ್ಲಿ ತಮಿಳುನಾಡಿನಿಂದ ಬಂದ್ ಲಿವರ್ ಆಫರ್ ತಿರಸ್ಕರಿಸುವುದು ಕಷ್ಟಸಾಧ್ಯವೇನಿರಲಿಲ್ಲ. ನಾವು ಹಾಗೆ ಮಾಡಿದ್ದರೆ ಸಾವಿನಲ್ಲಿ ಹೊಸ ಜೀವವನ್ನು ನೀಡಬೇಕೆನ್ನುವ ದಾನಿಯ ಬಯಕೆ ಅಪೂರ್ಣವಾಗಿ ಉಳಿದು ಬಿಡುತ್ತಿತ್ತು. ನಮಗೂ ಚಿಂತೆಯಾಯ್ತು. ಆದರೆ ರಿಸ್ಕ್‌ನ್ನು ಕಡೆಗಣಿಸಿ ಹೋಗಲು ನಿರ್ಧರಿಸಿದೆವು ಎನ್ನುತ್ತಾರೆ. 
 
ಕಳೆದ ಸೋಮವಾರ ಹಿಂದೆ ಅಪಘಾತವೊಂದರಲ್ಲಿ ತಲೆಗೆ ಗಾಯಗೊಂಡಿದ್ದ ವ್ಯಕ್ತಿ ಬುಧವಾರ ಮೆದುಳು ನಿಷ್ಕ್ರಿಯತೆಗೆ ಒಳಗಾಗಿದ್ದರು. ತಮ್ಮ ಅಂಗಾಂಗ ದಾನ ಮಾಡಬೇಕೆಂದು ಅವರ ಕೊನೆಯಾಸೆಯಾಗಿತ್ತು ಎಂದು ತಿಳಿದು ಬಂದಿದೆ. 
 
ಸತತ 12 ತಾಸುಗಳ ಶಸ್ತ್ರಚಿಕಿತ್ಸೆ ಫಲಪ್ರದವಾಗಿದ್ದು, ರೋಗಿ ಆರೋಗ್ಯವಾಗಿದ್ದಾನೆ. ಆತ ಮತ್ತು ಆತನ ಕುಟುಂಬದ ಸಂತೋಷವನ್ನು ಕಂಡಾಗ ನಮ್ಮ ಪ್ರಯತ್ನ ಯಶ ಕಂಡ ತೃಪ್ತಿ ನಮ್ಮಲ್ಲಿತ್ತು ಎನ್ನುತ್ತಾರೆ  ಒಲಿತ್‌ಸೆಲ್ವನ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರ್ ಕೇಂದ್ರ ಸಚಿವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್‌, ಕಾರಣ ಹೀಗಿದೆ

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಬಾಲಕಿ ಮೇಲೆ ಅತ್ಯಾಚಾರ: 20ವರ್ಷ ಜೈಲು

ಮೊದಲ ಹಂತದಲ್ಲೇ ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ: ಮಧು ಬಂಗಾರಪ್ಪ

ಏರ್‌ ಇಂಡಿಯಾ ವಿಮಾನ ಅಪಘಾತ: ಕೊನೆಗೂ ಪ್ರಾಥಮಿಕ ವರದಿ ಸಿದ್ದ, 2 ಪುಟಗಳ ವರದಿ ಸಲ್ಲಿಕೆ

ಹುಬ್ಬಳ್ಳಿ- ಧಾರವಾಡದ 65 ಪೊಲೀಸ್ ಅಧಿಕಾರಿಗಳಿಗೆ ಬೊಜ್ಜು ಕರಗಿಸುವ ಟ್ರೈನಿಂಗ್,4ರಿಂದ 11ಕೆಜಿ ಇಳಿಕೆ

ಮುಂದಿನ ಸುದ್ದಿ
Show comments