Webdunia - Bharat's app for daily news and videos

Install App

3000 ಕಾಂಡೋಮ್ ಹುಡುಕುತ್ತಾರೆ, ಒಬ್ಬ ವಿದ್ಯಾರ್ಥಿಯನ್ನು ಹುಡುಕಲಾಗುವುದಿಲ್ಲ

Webdunia
ಮಂಗಳವಾರ, 8 ನವೆಂಬರ್ 2016 (16:08 IST)
ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿರುವ ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ಬಿಜೆಪಿ ನೇತೃತ್ವದ ಸರ್ಕಾರ ವಿವಿಯಲ್ಲಿ 3,000 ಕಾಂಡೋಮ್‌ಗಳನ್ನು ಹುಡುಕಲು ಶಕ್ತವಾಗುತ್ತದೆ. ಆದರೆ ಒಂದು ವಿದ್ಯಾರ್ಥಿಯನ್ನು ಹುಡುಕುವಲ್ಲಿ ವಿಫಲವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. 
 
ನಾಪತ್ತೆಯಾಗಿರುವ ವಿದ್ಯಾರ್ಥಿ ನಜೀಬ್ ಅಹ್ಮದ್‌ನನ್ನು ಹುಡುಕಲು ಅಧಿಕಾರಿಗಳು, ಪೊಲೀಸ್ ಇಲಾಖೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ.
 
ರಾಷ್ಟ್ರೀಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ವರದಿಯ ಪ್ರಕಾರ ಕುಮಾರ್, ತಮ್ಮ ಪುಸ್ತಕ 'ಬಿಹಾರದಿಂದ ತಿಹಾರ್' ಬಿಡುಗಡೆ ಸಂದರ್ಭದಲ್ಲಿ ಈ ಮಾತುಗಳನ್ನಾಡಿದ್ದಾರೆ. 
 
ಅವರು ಜೆಎನ್‌ಯುನಲ್ಲಿ ಬಳಕೆಯಾದ ಕಾಂಡೋಮ್‌ಗಳ ಲೆಕ್ಕ ಹಾಕಬಲ್ಲಷ್ಟು ಬುದ್ಧಿವಂತರು. ಆದರೆ ಅದೇ ಬುದ್ಧಿವಂತಿಕೆ ಬಳಸಿ ನಜೀಬ್ ಎಲ್ಲಿದ್ದಾನೆ ಎಂದು ಪತ್ತೆ ಹಚ್ಚುವಲ್ಲಿ ಅಸಮರ್ಥರಾಗಿದ್ದಾರೆ ಎಂದು ದೇಶದ್ರೋಹದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ ಕುಮಾರ್ ಹೇಳಿದ್ದಾರೆ.
 
ಜೆಎನ್‌ಯುನ ಆವರಣದಲ್ಲಿ ವಾಸಿಸುವ ವಿದ್ಯಾರ್ಥಿಗಳಿಂದ ಪ್ರತಿದಿನ 3,000ದಷ್ಟು ಕಾಂಡೋಮ್ ಬಳಕೆಯಾಗುತ್ತದೆ, ಎಂದು ಬಿಜೆಪಿ ಸಂಸದ ಜ್ಞಾನದೇವ್ ಆರೋಪಿಸಿದ್ದರು.
 
ಅಲ್ಲಿ ಪ್ರತಿದಿನ ನೀವು 3,000 ಬಿಯರ್ ಬಾಟಲ್, 2,000 ಭಾರತೀಯ ಮದ್ಯದ ಬಾಟಲಿಗಳು, 2,000 ಚಿಪ್ಸ್ ಕವರ್,10,000 ಸಿಗರೇಟ್ ಬಟ್ಸ್, 4,000ಬೀಡಿ, 50,000 ಎಸುಬಿನ ತುಂಡುಗಳು,500 ಗರ್ಭಪಾತದ ಚುಚ್ಚುಮದ್ದುಗಳನ್ನು ಪತ್ತೆ ಹಚ್ಚಬಹುದು ಎಂದು ಅಹುಜಾ ಹೇಳಿದ್ದರು.
 
ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಅಕ್ಟೋಬರ್ 14ರಿಂದ ನಾಪತ್ತೆಯಾಗಿದ್ದು ಆತನ ಪತ್ತೆಗೆ ಆಗ್ರಹಿಸಿ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಬೆಲೆ ಎಷ್ಟಾಗಿದೆ ನೋಡಿ

Gold Price today: ಚಿನ್ನ ಖರೀದಿದಾರರಿಗೆ ಇಂದು ಗುಡ್ ನ್ಯೂಸ್

Dog viral video: ಚಿರತೆಯಿಂದ ತಮ್ಮ ಗೆಳೆಯನ ರಕ್ಷಿಸಿದ ನಾಯಿಗಳು

India Pakistan: ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು 400 ಅಲ್ಲ, ಇನ್ಯಾರು

Gruhalakshmi: ಮೂರು ತಿಂಗಳಿನಿಂದ ಬಂದಿಲ್ಲ ಗೃಹಲಕ್ಷ್ಮಿ ಹಣ: ವೋಟ್ ಹಾಕಲ್ಲ ಎಂದ ಮಹಿಳೆಯರು

ಮುಂದಿನ ಸುದ್ದಿ
Show comments