Select Your Language

Notifications

webdunia
webdunia
webdunia
webdunia

ಕನ್ನೈಯ್ಯಾ ಜಾಮೀನು ಅರ್ಜಿ: ವಿಚಾರಣೆ ಫೆ.29ಕ್ಕೆ ಮುಂದೂಡಿಕೆ

ಕನ್ನೈಯ್ಯಾ ಜಾಮೀನು ಅರ್ಜಿ: ವಿಚಾರಣೆ ಫೆ.29ಕ್ಕೆ ಮುಂದೂಡಿಕೆ
ನವದೆಹಲಿ , ಬುಧವಾರ, 24 ಫೆಬ್ರವರಿ 2016 (13:21 IST)
ದೇಶದ್ರೋಹಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬಂಧಿತನಾಗಿರುವ ದೆಹಲಿಯ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹೈಯ್ಯಾ ಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಫೆಬ್ರವರಿ 29 ಕ್ಕೆ ಮುಂದೂಡಿದೆ. ಹೀಗಾಗಿ ಮತ್ತೊಂದು ವಾರ ಕನ್ಹೈಯ್ಯಾ ನ್ಯಾಯಾಂಗ ಬಂಧನದಲ್ಲೇ ಇರಬೇಕಾಗುತ್ತದೆ.
 
ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ ಕನ್ಹೈಯ್ಯಾ ಕುಮಾರ್, ತಿಹಾರ್ ಜೈಲಿನಲ್ಲಿ ತಮಗೆ ಪ್ರಾಣ ಭೀತಿ ಇದ್ದು, ಜಾಮೀನು ಮಂಜೂರುಗೊಳಿಸುವಂತೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.  
 
ಈ ಕುರಿತು ಕಳೆದ ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಿಯಮದ ಪ್ರಕಾರ ಮೊದಲು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.
 
ಕುಮಾರ್ ಪರ ವಕೀಲರಾದ ಅನಿಂದಿತಾ ಪೂಜಾರಿ ಹೈಕೋರ್ಟ್‌ನಲ್ಲಿ ಸಹ ಅವರಿಗೆ ಭದ್ರತೆ ಇಲ್ಲ ಎಂಬ ವಿಚಾರವನ್ನು ಮುಂದಿಟ್ಟಾಗ  ಭದ್ರತೆಯೊಂದಿಗೆ ಅರ್ಜಿ ಸಲ್ಲಿಸಿ, ಅಲ್ಲಿ ಜಾಮೀನು ಪಡೆಯಲು ವಿಫವಾದರೆ ಇಲ್ಲಿಗೆ ಬನ್ನಿ ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕನ್ನೈಯ್ಯಾ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 
 
ಇತ್ತ ವಿದ್ಯಾರ್ಥಿ ಉಮರ್ ಖಾಲಿದ್ ಉಗ್ರ ಅಫ್ಜಲ್ ಗುರು ಪರ ಘೋಷಣೆ ಕೂಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Share this Story:

Follow Webdunia kannada