Webdunia - Bharat's app for daily news and videos

Install App

ಕಟಕಟೆಯಲ್ಲಿ ಶಶಿಕಲಾ: ಇಬ್ಬರು ನ್ಯಾಯಮೂರ್ತಿಗಳಿಂದ ಪ್ರತ್ಯೇಕ ತೀರ್ಪು

Webdunia
ಮಂಗಳವಾರ, 14 ಫೆಬ್ರವರಿ 2017 (09:59 IST)
ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ, ದಿವಂಗತ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಅವರ ರಾಜಕೀಯ ಭವಿಷ್ಯ ಇನ್ನು ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ. ಅವರನ್ನು ಸುತ್ತಿಕೊಂಡಿರುವ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಇಂದು ಮುಂಜಾನೆ 10.30 ಕ್ಕೆ ಪ್ರಕಟವಾಗಲಿದೆ. 
21 ವರ್ಷಗಳಷ್ಟು ಹಳೆಯ ಈ ಪ್ರಕರಣದ ತೀರ್ಪು ಸದ್ಯ ತಮಿಳುನಾಡಿನಲ್ಲಾಗುತ್ತಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. 
 
ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್ ಮತ್ತು ಅಮಿತವ್ ರಾಯ್  ಬೆಳಿಗ್ಗೆ 10.30ಕ್ಕೆ ಪ್ರತ್ಯೇಕವಾಗಿ ತೀರ್ಪನ್ನು ಪ್ರಕಟಿಸಲಿದ್ದಾರೆ. ಇಬ್ಬರ ತೀರ್ಪು ಒಂದೇ ಆಗಿಲ್ಲದಿದ್ದರೆ ಅದು ಶಶಿಕಲಾ ಪಾಲಿಗೆ ವರದಾನವೆನಿಸಿಕೊಳ್ಳಲಿದೆ. ಹೀಗಾಗಿದ್ದೇ ಆದರೆ ತ್ರಿಸದಸ್ಯ ಪೀಠ ಹೊಸದಾಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ. 
 
ಎರಡು ಕಡೆಯಿಂದ ಶಶಿಕಲಾ ದೋಷಿ ಎಂಬ ತೀರ್ಪು ಪ್ರಕಟವಾದರೆ ಶಶಿಕಲಾ ಜೈಲುಪಾಲಾಗುವುದು ನಿಶ್ಚಿತ. ಶಿಕ್ಷೆ ಅವಧಿ ಪೂರ್ಣಗೊಂಡ ನಂತರ ಸಹ 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. 
 
ಒಂದು ವೇಳೆ ಎರಡು ಕಡೆ ತೀರ್ಪು ಶಶಿಕಲಾ ಪರವಾಗಿ ಬಂದು ಅವರು ಖುಲಾಸೆಯಾದರೆ ಅವರ ರಾಜಕೀಯದ ಹಾದಿ ಸುಗಮವಾಗುತ್ತದೆ. ಮುಖ್ಯಮಂತ್ರಿಯಾಗಲು ಹೆಣಗಾಡುತ್ತಿರುವ ಅವರು ಬಹುಮತ ಸಾಬೀತು ಪಡಿಸಿ ಸಿಎಂ ಕುರ್ಚಿಯನ್ನು ಏರಬಹುದು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments