Webdunia - Bharat's app for daily news and videos

Install App

ಪಕೋಡಾ, ತರಕಾರಿ ಖರೀದಿಸಬೇಕಾದ್ರೆ ಪ್ಯಾನ್ ಕಾರ್ಡ್ ಕಡ್ಡಾಯ

Webdunia
ಶುಕ್ರವಾರ, 1 ಏಪ್ರಿಲ್ 2016 (19:15 IST)
ವಿಶ್ವದ ವಜ್ರಗಳ ತವರೂರು ಎಂದು ಕರೆಸಿಕೊಳ್ಳುವ ನಗರದಲ್ಲಿ ಚಿನ್ನಾಭರಣಗಳ ವಹಿವಾಟುದಾರರು ಪಕೋಡಾ ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಆರಂಭಿಸಿದ್ದು, 10 ರೂಪಾಯಿಗಳಿಗಿಂತ ಹೆಚ್ಚಿನದನ್ನು ಖರೀದಿಸಬೇಕಾದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿದ್ದಾರೆ.
 
ಇದು ಏಪ್ರಿಲ್ ಫೂಲ್ ಜೋಕ್ ಅಲ್ಲ. ಸತ್ಯ, ನಂಬಿದ್ರೆ ನಂಬಿ ಬಿಟ್ರೆ ಬಿಡಿ ನಿಮ್ಮಿಷ್ಟ. ಒಂದು ವೇಳೆ, ನೀವು ಹಾಸ್ಯಾಸ್ಪದ ಎಂದು ಭಾವಿಸಿದಲ್ಲಿ.ಅದೇ ಹಾಸ್ಯಾಸ್ಪದವನ್ನು ಕೇಂದ್ರ ಸರಕಾರಕ್ಕೆ ತೋರಿಸಲು ವರ್ತಕರು ಮಾಡಿರುವ ವಿನೂತನ ಪ್ರತಿಭಟನೆ. 
 
ಕೇಂದ್ರ ಸಚಿವ ಅರುಣ್ ಜೇಟ್ಲಿ, ಚಿನ್ನಾಭರಣಗಳಿಗೆ ಸಂಬಂಧಿಸಿದ ವಹಿವಾಟು 2 ಲಕ್ಷ ರೂಪಾಯಿಗಳಿಗೆ ಮೀರಿದ್ದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿರುವುದು ಕೂಡಾ ಅಷ್ಟೆ ಹಾಸ್ಯಾಸ್ಪದ ಎನ್ನುವುದು ಚಿನ್ನಾಭರಣ ವಹಿವಾಟುದಾರರ ಅಭಿಪ್ರಾಯವಾಗಿದೆ.
 
ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇರಿದ ಶೇ.1 ರಷ್ಟು ಅಬಕಾರಿ ತೆರಿಗೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಿರುವ ಚಿನ್ನಾಭರಣಗಳ ವರ್ತಕರು, ಅಬಕಾರಿ- ಟೀ ಕೂಡಾ ಮಾರಾಟ ಮಾಡಿ ಕೇಂದ್ರ ಸರಕಾರವನ್ನು ಗೇಲಿ ಮಾಡುತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments